ಕಥಾ ನಾಯಕ ವಿ.ರವಿಚಂದ್ರನ್ ಅವರನ್ನು ಪರಿಚಯಿಸುವ ಈ ಹಾಡಿಗೆ ದರ್ಶನ್ ಮೂಲಕ ಹೆಚ್ಚು ಲಿಫ್ಟ್ ಸಿಕ್ಕಂತಾಗಿದೆ ಎನ್ನುತ್ತಾರೆ ರಮೇಶ್. ಚಿತ್ರದಲ್ಲಿ ಕ್ರೇಜಿ ಸ್ಟಾರ್ ವಕೀಲನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೋನಿಯ ಅಗರ್ವಾಲ್ ಈ ಹಿಂದೆ ‘ಚಂದು’ ಸಿನಿಮಾದಲ್ಲಿ ನಾಯಕಿ ಆಗಿ ಸುದೀಪ್ ಜೊತೆ ಅಭಿನಯಿಸಿದ್ದರು. ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ನಾಯಕಿ. ಮೇಘಶ್ರೀ ಮತ್ತೊಂದು ಮುಖ್ಯ ಪಾತ್ರದಲ್ಲಿದ್ದಾರೆ. ಗುರುಕಿರಣ್ ರಾಗ ಸಂಯೋಜನೆ, ವಿ.ರವಿಚಂದ್ರನ್ ಪೆಟ್ ಛಾಯಾಗ್ರಾಹಕ ಸೀತಾರಾಂ ಜೊತೆಯಾಗಿದ್ದಾರೆ. ಈ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ರವಿಚಂದ್ರನ್ ಚಿತ್ರದ ಹಾಡಿಗೆ ಧ್ವನಿಯಾದ ದರ್ಶನ್!!
ಹೌದು, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರ ‘ದಶರಥ’ ಸಿನಿಮಾದ ಒಂದು ಹಾಡು ಹೇಳಿದ್ದಾರೆ ದರ್ಶನ್. ಕಥಾ ನಾಯಕನ ಬಗ್ಗೆ ಪರಿಚಯ ಮಾಡಿಸಲು ಈ ಹಾಡು ಬೇಕಿತ್ತು. ಪ್ರಾರಂಭದಲ್ಲಿ ಹಾಡು ಹೇಳಲು ಒಪ್ಪಿಕೊಂಡಿರಲಿಲ್ವಂತೆ. ಆದರೆ, ನಿರ್ದೇಶಕ ಎಂ.ಎಸ್ ರಮೇಶ್ ಬಿಡದೇ ಅವರು ಬರೆದ ಸಾಹಿತ್ಯವನ್ನು ದರ್ಶನ್ ಕೈಯಲ್ಲಿ ಹೇಳಿಸಿದ್ದಾರೆ. ಇದು ಪದ್ಯದ ದಾಟಿಯಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ.