ಸೇವಾಲಾಲ್ ಜಯಂತಿ ಅದ್ದೂರಿ ಆಚರಣೆಗೆ ಸಿದ್ದತೆ.

ಚಳ್ಳಕೆರೆ

     ತಾಲ್ಲೂಕಿನ ಬಂಜಾರ ಸಮುದಾಯದ ಆರಾಧ್ಯ ದೈವ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಕಾರ್ಯಕ್ರಮ ಯಶಸ್ಸಿಗೊಳಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಸಹಕರಿಸುವಂತೆ ಮನವಿ ಮಾಡಿದರು.

        ಪ್ರಾರಂಭದಲ್ಲಿ ಮಾತನಾಡಿದ ಕುರುಡಿಹಳ್ಳಿಯ ಸಾಧುಸ್ವಾಮೀಜಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಸೇವಾಲಾಲ್ ಜಯಂತಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ಈಗಾಗಲೇ ಸಮುದಾಯದ ನಿರ್ಧರಿಸಿದ್ದು, ತಾಲ್ಲೂಕು ಆಡಳಿತದ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಸಿದ್ದತೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

         ಬಂಜಾರ ಸಮುದಾಯದ ಹಿರಿಯ ಮುಖಂಡ, ಮಕ್ಕಳ ತಜ್ಞ ಡಾ.ಬಿ.ಚಂದ್ರನಾಯ್ಕ ಮಾತನಾಡಿ, ಸೇವಾಲಾಲ್ ಜಯಂತಿ ಕಾರ್ಯಕ್ರಮ ನಮ್ಮ ಸಮುದಾಯದ ಸಂಘಟನೆಗೆ ಉತ್ತಮ ಕಾರ್ಯವಾಗಿದ್ದು, ಸಮುದಾಯದ ಬಹುತೇಕ ಮುಖಂಡರು ಈಗಾಗಲೇ ಕಾರ್ಯಕ್ರಮದ ಯಶಸ್ಸಿಯಾಗಿ ಶ್ರಮವಹಿಸುತ್ತಿದ್ಧಾರೆ. ತಾಲ್ಲೂಕು ಆಡಳಿತ ಸಹಕಾರದೊಂದಿಗೆ ಫೆ.17ರಂದು ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

          ಈ ಸಂದರ್ಭದಲ್ಲಿ ಬಂಜಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪಿಎಸ್‍ಐ ಕೆ.ಸತೀಶ್‍ನಾಯ್ಕ, ಸಮುದಾಯದ ಮುಖಂಡರಾದ ಗೋವಿಂದನಾಯ್ಕ, ಗೀತಾಬಾಯಿ, ರಾಜಣ್ಣ, ರಮೇಶ್‍ನಾಯ್ಕ, ಯಶ್ವಂತ್‍ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap