ಶಿವಮೊಗ್ಗ
ರಾಮನಗರದ ಬಂಡೆ ಎಂದೇ ಖ್ಯಾತರಾದ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಚುನಾವಾಣಾ ಉಸ್ತುವಾರಿ ವಹಿಸಿಕೊಳ್ಳುತ್ತಿರುವ ಬಗ್ಗೆ ಬಿಜೆಪಿ ಹೆದರಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿರುವ ಆಯನೂರು ಮಂಜುನಾಥ್, ಇಂತಹ ಎಷ್ಟೇ ಶಿವಕುಮಾರ್ ಗಳು ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದರು.
ಪ್ರಧಾನಿ ಮೋದಿಗೆ ಷಂಡ ಎಂದು ಪದಬಳಕೆ ಮಾಡಿದ ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಯನೂರು, ಷಂಡ ಪದ ಬಳಕೆ ಸರಿಯಲ್ಲ. ಮೋದಿಯವರು, ಷಂಡ ಹೌದೋ, ಅಲ್ಲವೋ ಎಂಬುದು, ಈ ಚುನಾವಣೆ ನಿರ್ಧಾರ ಮಾಡುತ್ತೆ ಎಂದು ತಿಳಿಸಿದರು.
ದೇಶ ಮಾರುವವರ ಎದುರು ಚಾಯ್ ಮಾರುವವ ಉತ್ತಮ ಎಂಬುದು ಈಗಾಗಲೇ ಸಾಬೀತಾಗಿದೆ. ದೇಶದ ಮೇಲೆ ಹಲವು ದಾಳಿಗಳಾದ ಸಂದರ್ಭದಲ್ಲಿ ನಾಮರ್ಧರಾಗಿದ್ದವರು, ಕಾಂಗ್ರೆಸ್ ನವರೇ ಹೊರತು ಮೋದಿಯಲ್ಲ. ಮೋದಿಯವರು ಈಗಾಗಲೇ ಅದನ್ನು ಸಾಬೀತು ಮಾಡಿದ್ದಾರೆ.ಸೈನಿಕರ ದಾಳಿಗೆ ಸಾಕ್ಷಿ ಕೇಳಿದವರು ಷಂಡರಾಗುತ್ತಾರೆ ಎಂದು ಮಂಜುನಾಥ್ ಟೀಕಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/DKS-2.gif)