ಬೆಂಗಳೂರು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ತಿಂಗಳಿನಿಂದ ಮಾಂಸಾಹಾರ ನೀಡದಿರುವುದಕ್ಕೆ ಆಕ್ರೋಶಗೊಂಡು ಕೈದಿಗಳು ಮಧ್ಯಾಹ್ನದ ಊಟ ತ್ಯಜಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ..
ಕೈದಿಗಳಿಗೆ ಪ್ರತಿ ಶುಕ್ರವಾರದಂದು ಮಾಂಸಾಹಾರ ನೀಡಲಾಗುತ್ತಿದ್ದು, ಆದರೆ ಮೂರು ತಿಂಗಳ ಹಿಂದೆ ಮಾಂಸ ಪೂರೈಸುವ ಟೆಂಡರ್ ಪಡೆದ ವ್ಯಕಿ ಪ್ರಕರಣ ವೊಂದರಲ್ಲಿ ಬಂಧಿತನಾಗಿರುವ ಕಾರಣ ಮಾಂಸಾಹಾರ ನೀಡಲಾಗಿರಲಿಲ್ಲ.ಶುಕ್ರವಾರ ಮಾಂಸಾಹಾರ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದ ಕೈದಿಗಳಿಗೆ ಸಸ್ಯಾಹಾರ ಊಟ ನೀಡುತ್ತಿದ್ದಂತೆಯೇ ಆಕ್ರೋಶಗೊಂಡು ನೂರಾರು ಕೈದಿಗಳು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಧಾವಿಸಿದ ಜೈಲಿನ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರು ಸದ್ಯದಲ್ಲಿಯೇ ಮಾಂಸಹಾರ ಪೂರೈಸುವುದಾಗಿ ಕೈದಿಗಳಿಗೆ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
