ಬೆಂಗಳೂರು:
ತೀವ್ರ ಅನಾರೋಗ್ಯದಿಂದ ಐಸಿಯೂ ನಲ್ಲಿ ಬಳಲುತ್ತಿದ್ದ ನಟ ಅನಿಲ್ ನೀನಾಸಂ ಅವರು ವಿಧಿವಶರಾಗಿದ್ದಾರೆ.
ಅನಿಲ್ ನೀನಾಸಂ ಅವರ ಅನಾರೋಗ್ಯ, ಆರ್ಥಿಕ ಸಮಸ್ಯೆಯ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು, ಅನಿಲ್ ಅವರಿಗೆ ನಟ ದರ್ಶನ್ ಸೇರಿದಂತೆ ಅನೇಕರು ಸಹಾಯ ಮಾಡಿದ್ದರು.
ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿಕೊಂಡಿದ್ದ ಅನಿಲ್, ಮಾತೂ ಆಡಲಾಗದ ಸ್ಥಿತಿಯಲ್ಲಿರುವ ಅವರೀಗ ಚಿಕೆತ್ಸೆಯ ವೆಚ್ಚ ಸೇರಿದಂತೆ ಯಾವುದನ್ನು ಭರಿಸಲಾಗದ ಶೋಚನೀಯ ಸ್ಥಿತಿ ತಲುಪಿದ್ದರು.
ಇಲ್ಲಿಯವರೆಗೂ ಐಸಿಯೂನಲ್ಲಿರುವ ಅನಿಲ್ ಅವರ ಚಿಕಿತ್ಸೆಗಾಗಿ ದಿನಕ್ಕೆ ನಲವತ್ತೈದು ಸಾವಿರಕ್ಕೂ ಅಧಿಕ ಹಣ ವ್ಯಯವಾಗುತ್ತಿದೆ. ಆದರೆ ಅವರ ಕುಟುಂಬದವರಿಗೆ ಮಾತ್ರ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಶಕ್ತಿ ಇರಲಿಲ್ಲ. ಇಂದು ಅನಿಲ್ ತಮ್ಮ ಕೊನೆಯುಸಿರೆಲೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
