ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಮ್ಮ ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆಯೂ ಸಹ ಗೆಲುವಿಗಾಗಿ ಮತದಾರನ ಮೊರೆ ಹೋದಂತೆ ದೇವರಲ್ಲಿಯೂ ಸಹ ಮೊರೆ ಹೋಗಿದ್ಧಾರೆ.
ಅವರು, ಶುಕ್ರವಾರ ಚುನಾವಣೆ ಹಿನ್ನೆಯಲ್ಲಿ ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡ, ಶಿರಾ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಮುಂತಾದ ಕಡೆಗಳಲ್ಲಿ ಪ್ರಚಾರ ಕಾರ್ಯವನ್ನು ಮುಗಿಸಿ ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸಿದ್ದು, ಪ್ರಚಾರಕ್ಕೆ ಮುನ್ನವೇ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಕನ್ನೇಶ್ವರ ಆಶ್ರಮದ ದತ್ತಾವಧೂತ ಮಲ್ಲಿಕಾರ್ಜುನಸ್ವಾಮಿಯವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಭಗವಾನ್ ಶ್ರೀಸಾಯಿಬಾಬಾ ಪೂಜೆಯನ್ನು ನೆರವೇರಿಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿವಿಧಾನಗಳು ಸದಾನಮಗೆ ಶ್ರೇಯಸ್ಸನ್ನು ಬಯಸುತ್ತವೆ. ಬಹಿರಂಗ ಪ್ರಚಾರ ಕಾರ್ಯದಿಂದ ಗೆಲುವು ಸಾಧಿಸಲು ಸಾಧ್ಯವಾದರೂ ಭಗವಂತ ಕೃಪೆ ಮಾತ್ರ ಅವಶ್ಯಕವಾಗಿ ಬೇಕಾಗಿದೆ. ಅದ್ದರಿಂದ ಪ್ರಚಾರಕ್ಕೂ ಮುನ್ನ ಯುಗಾದಿ ಹಬ್ಬದ ಪ್ರಯುಕ್ತ ಇಲ್ಲಿಗೆ ಆಗಮಿಸಿ ದೇವರ ಪೂಜೆ ಸಲ್ಲಿಸಿ ನಂತರ ಗುರುಗಳ ಆಶೀರ್ವಾದ ಪಡೆದಿದ್ದೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ