ಹೊಸದಿಲ್ಲಿ :
ನಾನು ದೇಶ ರಕ್ಷಣೆಯ ಹೊಣೆ ಹೊತ್ತಿರುವ ವ್ಯಕ್ತಿ ಎಂದು ಹೇಳುವ ವ್ಯಕ್ತಿ ಇಂದು ತನ್ನ ಕರ್ತವ್ಯ ಮರೆತು ದೇಶದಲ್ಲಿ ಅರಾಜಕತೆ ಮತ್ತು ಕ್ಷೋಭೆ ಸೃಷ್ಟಿಸುವ ಕೆಲಸದಲ್ಲಿ ನಿರತರಾಗುದ್ದಾರೆ’ ಎಂದು ಜಯಾ ಬಚ್ಚನ್ ಟೀಕಿಸಿದ್ದಾರೆ.
ಎಸ್ಪಿ ಅಭ್ಯರ್ಥಿಯಾಗಿರುವ ಮಾಜಿ ನಟ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಪರ ಲಕ್ನೋದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಟೀಕೆ ಮಾಡಿದ್ದು ಇನ್ನು ಜನಸೇವೆಯ ಮಹದಾಸೆಯೊಂದಿಗೆ ಲೋಕಸಭಾ ಚುನಾವಣಾ ಕಣ ಪ್ರವೇಶಿಸಿರುವ ನವ ಅಭ್ಯರ್ಥಿ ಪೂನಂ ಸಿನ್ಹಾ ಅವರಿಗೆ ಮತದಾರರು ಸಂಪೂರ್ಣ ಬೆಂಬಲ ನೀಡಬೇಕು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
