ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಪಕ್ಷೇತರರಿಗೆ ಮಣೆ ಹಾಕಿದ ಮತದಾರ

ಹೊಳಲ್ಕೆರೆ:

      ಅರೆಮಲೆನಾಡು ಹೊಳಲ್ಕೆರೆ ಪಪಂ ನ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಹಿಂದೆಂದು ಕಾಣದ ಐತಿಹಾಸಿಕ ಫಲಿತಾಂಶ ಪ್ರಕಟಗೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಮೇಲೆ ಮುನಿದಿರುವ ಮತದಾರ ಪಕ್ಷೇತರರಿಗೆ ಮಣೆ ಹಾಕಿದ್ದಾರೆ.

ಪಕ್ಷೇತರರ ಪಾರುಪತ್ಯ:

  ಪಪಂ ನಲ್ಲಿ ಒಟ್ಟು 16 ವಾರ್ಡಗಳಿದ್ದು, ಅದರಲ್ಲಿ ಕಾಂಗ್ರೆಸ್ 3, ಬಿಜೆಪಿ 6, ಪಕ್ಷೇತರರು 7 ಸ್ಥಾನ ಪಡೆಯುವ ಮೂಲಕ ಅತಂತ್ರ ಸ್ಥಿತಿ ಎದುರಾಗಿದೆ. ಅಲ್ಲದೆ ಒಂದೇ ಕುಟುಂಬದ ಖಾಟ್ರೋತ್ ವಂಶಸ್ಥರ ಮೂವರನ್ನು ಪಕ್ಷೇತರ ಸ್ಥಾನದಲ್ಲಿ ಗೆಲ್ಲಿಸುವ ಮೂಲಕ ಐತಿಹಾಸಿಕ ಗೆಲುವನ್ನು ಸೃಷ್ಠಿಸಿದಂತಾಗಿದೆ.

    ಕಳೆದ ಬಾರಿ 2014 ರಲ್ಲಿ ಬಿಜೆಪಿ ಹಾಗೂ ಕೆಜೆಪಿ ಇಬ್ಬಾಗವಾಗಿ ಸ್ಪರ್ಧಿಸಿತ್ತು. ಆ ಸಂದರ್ಭದಲ್ಲಿ ಒಟ್ಟು 15 ವಾರ್ಡಗಳಿದ್ದವು. ಅದರಲ್ಲಿ ಕಾಂಗ್ರೆಸ್ 7, ಕೆಜೆಪಿ 5, ಬಿಜೆಪಿ 2 ಸ್ಥಾನಗಳಿಸಿದ್ದವು. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು.
 

ಒಂದೇ ಕುಟುಂಬದ ಮೂವರ ಗೆಲುವು:

      ಯಾವ ಪಕ್ಷದಿಂದಲೂ ಟಿಕೇಟ್ ನಿರೀಕ್ಷಿಸದೆ 5 ನೇ ವಾರ್ಡನಲ್ಲಿ ವಿಜಯಸಿಂಹ ಖಾಟ್ರೋತ್, 6 ನೇ ವಾರ್ಡ ಮಮತ ಜಯಸಿಂಹ ಖಾಟ್ರೋತ್, ಮತ್ತು 15 ವಾರ್ಡನಲ್ಲಿ ಸವಿತಾ ನರಸಿಂಹ ಖಾಟ್ರೋತ್ ಕಣದಲ್ಲಿದ್ದರು. ಪಟ್ಟಣದ ಖಾಟ್ರೋತ್ ಪ್ಯಾಮಿಲಿಯ ಮೂವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಮರು ಆಯ್ಕೆಯಾದವರು:

      ಸೈಯದ್ ಸಜೀಲ್ ಮೂರನೇ ಬಾರಿ ಆಯ್ಕೆಯಾಗಿದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಸವಿತಾ ನರಸಿಂಹ ಖಾಟ್ರೋತ್, ಕೆ.ಸಿ.ರಮೇಶ್, ಪಿ.ಎಚ್.ಮುರುಗೇಶ್ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

45 ನಿಮಿಷಗಳಲ್ಲಿ ಮತ ಎಣಿಕೆ ಮುಕ್ತಾಯ:

      ತಾಲೂಕು ಕಚೇರಿ ಕೊಠಡಿಯೊಂದರಲ್ಲಿ ಮತ ಎಣಿಕೆ ನಡೆದಿದ್ದು, ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಿದ್ದು, 8.45 ಕ್ಕೆ ಅಂದರೆ ಕೇವಲ 45 ನಿಮಿಷಗಳಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತು. ಮಾದ್ಯಮದವರಿಗೂ ಕೂಡ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶ ನಿಷೇಧಿಸಲಾಗಿತ್ತು. ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗಿತ್ತು.

ಆತ್ಮಹತ್ಯೆಗೆ ಯತ್ನ:

       ಪಪಂ ಯ ಎಂಟನೇ ವಾರ್ಡನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮದ್ಯೆ ನೇರಾ ಹಣಾ ಹಣಿ ಇತ್ತು. ಕಾಂಗ್ರೆಸ್ ನಿಂದ ಮಂಜುನಾಥ್ ಸಂಗನಗುಂಡಿ, ಬಿಜೆಪಿ ಯಿಂದ ಆರ್.ಎ.ಅಶೋಕ್ ಆಯ್ಕೆ ಬಯಸಿದ್ದರು. ಇಲ್ಲಿನ ವಾರ್ಡನಲ್ಲಿ ಬಿಜೆಪಿಯ ಅಶೋಕ್ ಜಯಗಳಿಸಿದ್ದರು.
ಮಾವ ಮಂಜುನಾಥ್ ಅವರ ಸೋಲಿನಿಂದ ಮನನೊಂದ ಅಳಿಯ ಅರ್ಜುನ್ (25) ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಈತನನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ಧಾಖಲಿಸಲಾಗಿದೆ.

59 ನೋಟ ಮತದಾನ:

       ವಿಶೇಷವೆಂದರೆ 16 ವಾರ್ಡಗಳಲ್ಲಿಯೂ ಕೂಡ ನೋಟ ಮತದಾನ ಚಲಾವಣೆಯಾಗಿದ್ದು, ಪ್ರತಿ ವಾರ್ಡಗಳಲ್ಲಿಯೂ ಕೂಡ ನೋಟ ಮತ ಚಲಾವಣೆಯಾಗಿದೆ. 16 ವಾರ್ಡಗಳಲ್ಲಿ ಒಟ್ಟು 59 ನೋಟ ಮತದಾನವಾಗಿದೆ. 8 ಅಂಚೆ ಮತದಾನವಾಗಿದೆ.

ಹೆಚ್ಚು ಹಾಗೂ ಕಡಿಮೆ ಗೆಲುವಿನ ಅಂತರ:

        8ನೇ ವಾರ್ಡ ನ ಆರ್.ಎ.ಅಶೋಕ್ ಅತಿ ಹೆಚ್ಚು 294 ಮತಗಳ ಅಂತರದಿಂದ, 3 ನೇ ವಾರ್ಡ ಡಿ.ಎಸ್.ವಿಜಯ ಅತಿ ಕಡಿಮೆ 8 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link