ನವದೆಹಲಿ:
ಉಗ್ರವಾದ ಹರಡುತ್ತಿರುವ ಕೆಲ ಇಸ್ಲಾಮಿಕ್ ಸಂಘಟನೆಗಳು ಭಾರತದ ಹಲವು ನಗರಗಳಲ್ಲಿ ಬೇರೂರಲು ಯತ್ನಿನಿಸಿವೇ ಕೇಂದ್ರ ಗೃಹ ಇಲಾಖೆಗೆ ಈ ಬಗ್ಗೆ ವರದಿ ಸಲ್ಲಿಸಿರುವ ಗುಪ್ತಚರ ದಳ, ದೇಶದಲ್ಲಿ ಉಗ್ರವಾದ ಪಸರಿಸಲು ಈ ಸಂಘಟನೆಗಳು ಮುಂದಾಗಿವೆ. ಕೇರಳದಲ್ಲಿ ನೆಲೆ ಕಂಡಿರುವ ಇಂತಹ ಗುಂಪುಗಳು ಇಂಡೋ-ನೇಪಾಳದ ಗಡಿಯಲ್ಲಿನ ಯುವಕರನ್ನು ಸೆಳೆಯುವ ಯತ್ನ ನಡೆಸುತ್ತಿವೆ. ಅಸ್ಸೋಂನಂತಹ ರಾಜ್ಯಗಳಲ್ಲಿ ಬಾಂಗ್ಲಾದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಇಂತಹ ಯತ್ನ ಮಾಡುತ್ತಿವೆ ಎಂದು ಹೇಳಿದೆ.
ಈ ಸಂಘಟನೆಗಳಿಗೆ ಗಲ್ಫ್ ದೇಶಗಳಿಂದ ವರಮಾನ ಬರುತ್ತಿದೆ. ಇದರಿಂದಲೇ ಹಲವು ಅಂತಾರಾಷ್ಟ್ರೀಯ ಮೂಲಭೂತವಾದಿ ಗುಂಪುಗಳು ಭಾರತದ ಪ್ರಮುಖ ನಗರಗಳತ್ತ ಕಣ್ಣು ನೆಟ್ಟಿವೆ. ಜರ್ಮನಿ, ರಷ್ಯಾ, ಚೀನಾ ಹಾಗೂ ಟರ್ಕಿಯಲ್ಲಿ ಬ್ಯಾನ್ ಆದ ಈ ಸಂಘಟನೆಗಳು ಇಲ್ಲಿ ನೆಲೆ ಕಾಣಲು ಬಯಸುತ್ತಿವೆ. ತಮಿಳುನಾಡಿನಲ್ಲಿಯೂ ಈ ಗುಂಪುಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ