ಹೊಳಲ್ಕೆರೆ:
ಇತ್ತೀಚಿನ ವ್ಯವಸ್ಥೆಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಅನಿವಾರ್ಯವಾಗಿದೆ ಎಂದು ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸಂಜೆ ನೋಂದಣಿಯಾದ ಕುಂಚಿಟಿಗ ಸೇವಾ ಸಮಿತಿ ಟ್ರಸ್ಟ್ನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.
ತಾಲ್ಲುಕಿನಲ್ಲಿ 25 ಸಾವಿರ ಜನಸಂಖ್ಯೆ ಹೊಂದಿದ್ದು, ಹೆಚ್ಚು ಪ್ರಬಲವಾಗಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯದವರು ಕೇವಲ ಆಶುವಾಸನೇ ಮಾತ್ರ ನೀಡುತ್ತಾರೆ. ಯಾವುದು ಆಶುವಾಸನೆ ಈಡೇರಿಲ್ಲ. ಕುಂಚಿಟಿಗ ಸಮಾಜದ ಜನರಲ್ಲಿ ಸಂಘಟನೆಯ ಕೊರತೆ ಇತ್ತು. ಇದನ್ನು ಮನಗೊಂಡು ಕುಂಚಿಟಿಗ ಜನಾಂಗ ಇರುವ ತಾಲ್ಲುಕಿನ 59 ಹಳ್ಳಿಗಳಿಂದ ಒಬ್ಬರು ಸದಸ್ಯರಂತೆ 59 ಸದಸ್ಯರನ್ನು ಟ್ರಸ್ಟ್ಗೆ ಆಯ್ಕೆ ಮಾಡಿದ್ದೇವೆ. ಸೇವೆಯೇ ಟ್ರಸ್ಟ್ನ ಮೂಲ ಉದ್ದೇಶವಾಗಿದೆ.
ಸದಸ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಯಾರು ಪ್ರತಿಷ್ಠೆ, ಪ್ರತಿಸ್ಪರ್ಧೆಗೆ ಅವಕಾಶ ಇಲ್ಲ. ಕುಂಚಿಟಿಗ ಮಠದ ಸಲಹೆ ಸಹಕಾರದಿಂದ ಟ್ರಸ್ಟ್ ಸ್ವತಂತ್ರ್ಯವಾಗಿ ಕೆಲಸ ಮಾಡಲಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಸಮುದಾಯದ ಏಳಿಗೆಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಳ್ಳಲಿದೆ. ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಹೊಣೆಗಾರಿಕೆ ಹೊಂದಲಿದೆ. ಸದಸ್ಯರು ಸಮಾಜದ ಆಶಯಗಳನ್ನು ಅರಿತು ನಡೆಯಬೇಕು. ಪ್ರತಿಷ್ಠೆ ಬದಿಗೊತ್ತಿ ಜನರೊಂದಿಗೆ ಬೆರೆತು ನಡೆಯಬೇಕು. ಎರಡೂ ಆಗದಿದ್ದರೆ ಸರಿದು ನಡೆಯಬೇಕು ಎಂದರು.
ಸಮಿತಿಯ ಪದಾಧಿಕಾರಿಗಳು:
ಪೀಠಾಧ್ಯಕ್ಷರಾಗಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಗೌರವಾಧ್ಯಕ್ಷರಾಗಿ ಜಿ.ಹೆಚ್.ಶಿವಕುಮಾರ್, ಅಧ್ಯಕ್ಷ ಟಿ.ಎಸ್.ರಾಜಪ್ಪ, ಕಾರ್ಯಾಧ್ಯಕ್ಷರುಗಳಾದ ಪಿ.ಆರ್.ಶಿವಕುಮಾರ್, ರಂಗಸ್ವಾಮಿ, ಉಪಾಧ್ಯಕ್ಷರುಗಳಾದ ತಿಮ್ಮಣ್ಣ, ಅಜ್ಜಣ್ಣ, ಜಗದೀಶ್, ಆನಂದ್, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಧಗ್ಗೆ, ಸುಮಂತ್, ಕಾರ್ಯದರ್ಶಿಗಳಾದ ಶ್ರೀನಿವಾಸ್, ಮುರಿಗೇಂದ್ರಪ್ಪ, ತೇಕಲವಟ್ಟಿ ನಾಗರಾಜ್, ಹೆಚ್.ಡಿ.ಪುರ ನಾಗರಾಜ್, ಸಂಚಾಲಕರಾದ ನವೀನ್, ವೆಂಕಟೇಶ್, ಖಜಾಂಚಿ ಜಿ.ಎಸ್.ಕುಮಾರ್, ಅರಣೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ರುದ್ರಮುನಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
