ಉದಯನಿಧಿ ತಲೆಗೆ 10 ಕೋಟಿ ಘೋಷಿಸಿದ ಸಂತ….!

ವದೆಹಲಿ :

       ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನೀಡಿದ ವಿವಾದತ್ಮಾಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಸಧ್ಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಮುಖ ಸಂತ ಪರಮಹಂಸ ಆಚಾರ್ಯ ಅವ್ರು ಉದಯನಿಧಿ ಸ್ಟಾಲಿನ್ ಅವರ ಫೋಟೋ ಹಿಡಿದು ಸಾಂಕೇತಿಕವಾಗಿ ಶಿರಚ್ಛೇದನ ನಡೆಸಿದರು.

 ಆಚಾರ್ಯ ಅವರು “ಉದಯನಿಧಿ ಮುರ್ದಾಬಾದ್” ಎಂದು ಹೇಳುವುದನ್ನ ಕಾಣಬಹುದು. ನಂತ್ರ ಖಡ್ಗವನ್ನ ಬಳಸಿ ಶಿರಚ್ಛೇದ ಪ್ರದರ್ಶಿಸಿದರು ಮತ್ತು ಉದಯನಿಧಿ ಸ್ಟಾಲಿನ್ ಅವರ ಪೋಸ್ಟರ್ಗೆ ಬೆಂಕಿ ಹಚ್ಚಿದರು. ಈ ಪ್ರಚೋದನಕಾರಿ ಕ್ರಮದ ಜೊತೆಗೆ ಆಚಾರ್ಯ ಅವರು ಡಿಎಂಕೆ ನಾಯಕನ ಶಿರಚ್ಛೇದ ಮಾಡುವವರಿಗೆ 10 ಕೋಟಿ ರೂ.ಗಳ ಬಹುಮಾನವನ್ನ ಘೋಷಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap