ನಟ ಅಲ್ಲು ಅರ್ಜುನ್​ಗೆ 14 ದಿನ ನ್ಯಾಯಾಂಗ ಬಂಧನ….!

ತೆಲಂಗಾಣ :

    ‘ಪುಷ್ಪ 2’ ಪ್ರೀಮಿಯರ್ ವೇಳೆ ಹೈದರಾಬಾದ್​​ನ ಸಂಧ್ಯಾ ಥಿಯೇಟರ್​​​ ಬಳಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ನಿಧನ ಹೊಂದಿದ್ದಳು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಕೂಡ ಆರೋಪಿ ಆಗಿದ್ದು, ಅವರಿಗೆ ಸಂಕಷ್ಟ ಹೆಚ್ಚುತ್ತಿದೆ. ಅಲ್ಲು ಅರ್ಜುನ್ ಅವರನ್ನು ಇಂದು (ಡಿಸೆಂಬರ್ 13) ಮುಂಜಾನೆ ಬಂಧಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಈ ಬೆನ್ನಲ್ಲೇ ಅವರನ್ನು ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ಅವರನ್ನು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನಾಂಪಲ್ಲಿ ಕೋರ್ಟ್‌ ಆದೇಶ ನೀಡಿದೆ. ‘ಪುಷ್ಪ 2’ ಗೆಲುವಿನ ಖುಷಿಯಲ್ಲಿ ಇದ್ದ ಅವರು, ಈಗ ಜೈಲು ಪಾಲಾಗಿದ್ದಾರೆ.

   ಒಂದೊಮ್ಮೆ ಹೈಕೋರ್ಟ್​ನಲ್ಲಿ ಈ ಪ್ರಕರಣಕ್ಕೆ ಬ್ರೇಕ್ ಬೀಳದೇ ಇದ್ದರೆ ಕೆಳ ಹಂತದ ಕೋರ್ಟ್​ನ ತೀರ್ಪು ಅಂತಿಮ ಆಗಲಿದೆ. ಈ ಮೂಲಕ ಅವರು ಚಂಚಲಗೂಡ ಜೈಲಿಗೆ ಹೋಗಬೇಕಿದೆ. ಶನಿವಾರ (ಡಿಸೆಂಬರ್ 14) ಹಾಗೂ ಭಾನುವಾರ (ಡಿಸೆಂಬರ್ 14) ಕೋರ್ಟ್ ಕಲಾಪ ನಡೆಯುವುದಿಲ್ಲ. ಆ ಸಂದರ್ಭದಲ್ಲಿ ಅಲ್ಲು ಅರ್ಜುನ್​ಗೆ ಜಾಮೀನು ಸಿಗುವುದಿಲ್ಲ. ಆಗ ಅವರು ಸೋಮವಾರದವರೆಗೆ ಕಾಯಬೇಕಾಗುತ್ತದೆ.

Recent Articles

spot_img

Related Stories

Share via
Copy link