ಕಾನೂನು ಮಾಡುವ ಹಕ್ಕು ಸಂಸತ್ತಿಗಿದೆ : ಅಮಿತ್‌ ಷಾ

ವದೆಹಲಿ :

   ಪೌರತ್ವ ತಿದ್ದುಪಡಿ ಕಾಯ್ದೆ (CAA)ಗೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಮತ್ತೊಮ್ಮೆ ವಿವಾದ ಪ್ರಾರಂಭವಾಗಿದೆ. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ಬಗ್ಗೆ ಎಲ್ಲಾ ಭಯ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಸಿಎಎ ಕಾನೂನನ್ನ ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವರು ಸಂದರ್ಶನವೊಂದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನ ಖಚಿತಪಡಿಸಿಕೊಳ್ಳುವುದು ಭಾರತಕ್ಕೆ ಸಂಬಂಧಿಸಿದ ವಿಷಯ ಮತ್ತು ಭಾರತದ ಸಾರ್ವಭೌಮತ್ವದ ನಿರ್ಧಾರ, ನಾವು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.

   ಈ ದೇಶದ ಅಲ್ಪಸಂಖ್ಯಾತರು ಅಥವಾ ಬೇರೆ ಯಾರಾದರೂ ಸಿಎಎಯಿಂದ ಭಯಪಡಬೇಕಾಗಿಲ್ಲ ಯಾಕಂದ್ರೆ, ಸಿಎಎಯಲ್ಲಿ ಯಾರ ಪೌರತ್ವವನ್ನ ಕಸಿದುಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದರು. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಸಿಖ್, ಜೈನ, ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿ ನಿರಾಶ್ರಿತರಿಗೆ ಮಾತ್ರ ಪೌರತ್ವ ನೀಡುವ ಕಾನೂನು ಇದೆ. 

   ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಸಿಎಎ ಜಾರಿಗೆ ತರುವುದಿಲ್ಲ ಎಂದು ಹೇಳಿವೆ. ನಮ್ಮ ಸಂವಿಧಾನದ 11 ನೇ ವಿಧಿಯಲ್ಲಿ, ಪೌರತ್ವದ ಬಗ್ಗೆ ಕಾನೂನುಗಳನ್ನ ಮಾಡುವ ಹಕ್ಕನ್ನ ಸಂಸತ್ತು ಭಾರತದ ಸಂಸತ್ತಿಗೆ ಮಾತ್ರ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದು ಕೇಂದ್ರ ವಿಷಯವಾಗಿದೆ, ಕೇಂದ್ರ ಮತ್ತು ರಾಜ್ಯಗಳ ಸಾಮಾನ್ಯ ವಿಷಯವಲ್ಲ. ಚುನಾವಣೆಯ ನಂತ್ರ ಎಲ್ಲರೂ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ನಾಯಕರು ತುಷ್ಟೀಕರಣ ರಾಜಕೀಯಕ್ಕಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಶಾ ಹೇಳಿದರು. 

   ಅಸ್ಸಾಂನಲ್ಲಿ ಸಿಎಎ ಅನುಷ್ಠಾನ ಮತ್ತು ಸಿಎಎ ಮತ್ತು NRCಗೆ ಸಂಬಂಧಿಸಿದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು NRCಗೂ ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಸಿಎಎಯನ್ನ ದೇಶದ ಪ್ರತಿಯೊಂದು ಭಾಗದಲ್ಲೂ ಜಾರಿಗೆ ತರಲಾಗುವುದು, ಅಸ್ಸಾಂನಲ್ಲಿ ಅಲ್ಲ. ಕಾನೂನಿನಲ್ಲಿ ಎರಡು ರೀತಿಯ ವಿಶೇಷ ಹಕ್ಕುಗಳನ್ನ ನೀಡಿರುವ ಈಶಾನ್ಯದ ರಾಜ್ಯಗಳಿಗೆ ಮಾತ್ರ ಸಿಎಎ ಅನ್ವಯಿಸುವುದಿಲ್ಲ ಎಂದು ಅವರು ಹೇಳಿದರು. ಇದು ಇನ್ನರ್ ಲೈನ್ ಪರ್ಮಿಟ್ (ILP ಗೆ ಅವಕಾಶವಿರುವ ಪ್ರದೇಶಗಳು ಮತ್ತು ಸಂವಿಧಾನದ 6ನೇ ಶೆಡ್ಯೂಲ್ ಅಡಿಯಲ್ಲಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶಗಳನ್ನ ಒಳಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap