ಬೆಂಗಳೂರು:
ಕ್ರಿಕೆಟ್ ದಂಥಕತೆಯ ನಾಯಕ ಅನಿಲ ಕುಂಬ್ಳೆ ಅವರು ಇಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರನ್ನು ಬೇಟಿಯಾಗಿದ್ದಾರೆ.
ಇನ್ನು ಡಿ. ಕೆ. ಶಿವಕುಮಾರ ಅವರ ಭೇಟಿ ಬಳಿಕ ಮಾತನಾಡಿದ ಅವರು RCB ಈ ಭಾರಿ ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಈ ಸಲ ಕಪ್ ನಮ್ದೆ ಅಂತ ಹೇಳ್ಬೇಡಿ, ಅದು ಹೇಳಿದಾಗೆಲ್ಲಾ ಸಮಸ್ಯೆ ಆಗುತ್ತಿದೆ, RCB ಚೆನ್ನಾಗಿ ಆಡುತ್ತಿದೆ, ಹಾಗೆಯೇ ಆಡಲಿ ಇನ್ನು ಅರ್ಧ ಮ್ಯಾಚ್ ಆಗಿದೆ, ಐಪಿಎಲ್ 18 ಸೀಸನ್ ಚೆನ್ನಾಗಿ ನಡೆದುಕೊಂಡು ಬಂದಿದೆ, ಇಂದು ಬೆಂಗಳೂರಲ್ಲಿ ಆಟ ಇದೆ, ಬೆಂಗಳೂರಿನಲ್ಲಿ ಇನ್ನು ಗೆದ್ದಿಲ್ಲ ಇಂದು ಗೆಲ್ಲುವ ವಿಶ್ವಾಸವಿದೆ, ನಾನು ಎರಡೂ ಟೀಂನಲ್ಲಿದ್ದೆ. ಸಮಸ್ಯೆ ಅದೇ’ ಆದರೂ ಎರಡು ತಂಡಕ್ಕೆ ಶುಭ ಕೋರುವೇ, ಈ ಬಾರಿ RCB ಕಪ್ ಗೆಲ್ಲುವ ನಿರೀಕ್ಷೆ ಇದೆ ಎಂದರು.
