ತೆರಿಗೆ ಬಾಕಿ ಪ್ರಕರಣ : ಅನುಷ್ಕಾ ಶರ್ಮಾ ಅರ್ಜಿ ವಜಾ…!

ಮುಂಬೈ:

  ತೆರಿಗೆ ಇಲಾಖೆಯ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಅನುಷ್ಕಾ ಅವರಿಗೆ ಎಂವಿಎಟಿ ಅಡಿ ಬದಲಿ ಮಾರ್ಗವಿದೆ ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಅಭಯ್ ಅಹುಜಾ ಅವರಿದ್ದ ಪೀಠ ಹೇಳಿತು. ಎಂವಿಎಟಿ ಅಡಿ ಮಾರಾಟ ತೆರಿಗೆಯ ಉಪ ಆಯುಕ್ತರಿಗೆ ನಾಲ್ಕು ವಾರಗಳ ಒಳಗೆ ಅರ್ಜಿ ಸಲ್ಲಿಸಲು ಕೋರ್ಟ್ ಅನುಷ್ಕಾಗೆ ಸೂಚನೆ ನೀಡಿತು. ಇದಕ್ಕಾಗಿ ಇಲಾಖೆ ವಿಧಿಸಿರುವ ತೆರಿಗೆ ಮೊತ್ತದಲ್ಲಿ ಶೇ. 10 ರಷ್ಟು ಠೇವಣಿ ಇಡಬೇಕಾಗುತ್ತದೆ ಎಂದು ಹೇಳಿತು.  

    ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ 2012 ರಿಂದ 2016ರವರೆಗಿನ ಬಾಕಿ ತೆರಿಗೆಯನ್ನು ಪಾವತಿಸುವಂತೆ ರಾಜ್ಯ ಮಾರಾಟ ತೆರಿಗೆ ಇಲಾಖೆ ನೀಡಿರುವ ಆದೇಶ ವಿರುದ್ಧ ಬಾಲಿವುಡ್ ನಟಿ ಅನುಷ್ಕಾ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಅನುಷ್ಕಾ ಅವರಿಗೆ ವಿನಾಯಿತಿ ನೀಡಲೂ ಹೈಕೋರ್ಟ್ ನಿರಾಕರಿಸಿತು.      

     ಅನುಷ್ಕಾ ಅವರು ನಡೆಸಿಕೊಡುವ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳ ಕೃತಿಸ್ವಾಮದ ಮೊದಲ ಮಾಲೀಕರು ಅವರೇ ಆಗಿರುವುದರಿಂದ ಈ ಪ್ರದರ್ಶನಗಳಿಂದ ಪಡೆಯುವ ಆದಾಯಕ್ಕೆ ಅವರು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಇಲಾಖೆ ಹೇಳಿತ್ತು. ಈ ಕುರಿತು 2021-22ರ ಅವಧಿಯಲ್ಲಿ ಅನುಷ್ಕಾ ಅವರಿಗೆ ಬಾಕಿ ಪಾವತಿಸುವಂತೆ ಆದೇಶ ನೀಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap