ಅರಸಾಪುರ : ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊರಟಗೆರೆ :-

    ರೋಟರಿ ಕ್ಲಬ್ ಕೊರಟಗೆರೆ, ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ತುಮಕೂರು, ಗ್ರಾಮ ಪಂಚಾಯಿತಿ ಅರಸಾಪುರ ಸೇರಿದಂತೆ ವಿವಿಧ   ಸಂಘಟನೆಗಳಿಂದ ಕೊರಟಗೆರೆ ತಾಲೂಕಿನ ಅರಸಾಪುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿ ನೂರಾರು ಜನ ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದರು.

   ಅರಸಾಪುರ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅವರಣದಲ್ಲಿ ಗ್ರಾಮ ಪಂಚಾಯತಿ ಸಹಯೋಗ ಸೇರಿದಂತೆ ಹಲವು ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ತಪಾಸಿನ ಶಿಬಿರ ಬಹಳ ಯಶಸ್ವಿಯಾಗಿ ಜರುಗಿ, ರೋಗಿಗಳು ಬಿಪಿ, ಶುಗರ್, ಕಣ್ಣಿನ ಚಿಕಿತ್ಸೆ, ಚರ್ಮರೋಗ , ಕಿವಿ ಮೂಗು ಗಂಟಲು, ಹಲ್ಲಿಗೆ ಸಂಬಂಧಪಟ್ಟಂತೆ ನೂರಾರು ಜನ ರೋಗಿಗಳು ವೈದ್ಯರಿಂದ ತಪಾಸಣೆಗೊಳಗಾದರು.

   ಕೊರಟಗೆರೆ ರೋಟರಿ ಕ್ಲಬ್ ಅಧ್ಯಕ್ಷ ಡಿ ಟಿ ಶ್ರೀನಿವಾಸ್ ಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಜನತೆ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಇಂತಹ 10 ಹಲವು ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಅಗತ್ಯತೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡಜನತೆಗೆ ಆಸರೆಯಾಗುವ ಸಂಕಲ್ಪ ಹೊಂದಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

   ರೋಟರಿ ಕ್ಲಬ್ ಕಾರ್ಯದರ್ಶಿ ವಿ ಎಸ್ ಮೂರ್ತಿ ಮಾತನಾಡಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಎಷ್ಟೂ ಮಹಿಳೆಯರು, ಅಂಗವಿಕಲರು, ವೃದ್ಧರು ಹಲವು ರೋಗ ರುಜನಗಳಿಂದ ಬಳಲುತ್ತಿದ್ದು, ತಾಲೂಕು ಕೇಂದ್ರ ಸ್ಥಾನಗಳಿಗೆ ಹಾಗೂ ಆಸ್ಪತ್ರೆಗಳಿಗೆ ಬಂದು ತೋರಿಸಲಾಗದ ಪರಿಸ್ಥಿತಿಯಲ್ಲಿದ್ದು ಅಂತಹ ಅಶಕ್ತ ಬಡ ಜನತೆಗೆ ಉಚಿತ ಆರೋಗ್ಯ ಶಿಬಿರಗಳು ಆಸರೆಯಾಗಲಿವೆ ಎಂದರು.

   ರೋಟರಿ ಕ್ಲಬ್ ನ ಖಜಾಂಚಿ ನರಸಿಂಹಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಜನತೆ ಪ್ರಸಕ್ತ ಸನ್ನಿವೇಶದಲ್ಲಿ ಬಹಳಷ್ಟು ಜನ ದೃಷ್ಟಿ ದೋಷ, ಕನ್ನಡಕಗಳ ಕೊರತೆ, ಬಿಪಿ ಶುಗರ್ ಬಗ್ಗೆ ಅರಿವಿಲ್ಲದೆ ಬಹಳಷ್ಟು ರೋಗ ರುಜ ನಗಳಿಂದ ಬಳಲುತ್ತಿದ್ದು, ಇಂತಹ ಬಡ ಜನತೆಗೆ ಆಸರೆಯಾಗುವ ದೃಷ್ಟಿಯಿಂದ ಕೊರಟಗೆರೆ ರೋಟರಿ ಕ್ಲಬ್ ಕೊರಟಗೆರೆ ತಾಲೂಕಿನಲ್ಲಿ ಹೋಬಳಿವಾರು ಉಚಿತ ತಪಾಸಿನ ಶಿಬಿರಗಳನ್ನ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನತೆಯ ಅಸರೆಗೆ ನಿಲ್ಲಲಾಗುವುದು ಎಂದು ಅಭಿಪ್ರಾಯಪಟ್ಟರು.

   ತುಮಕೂರು ಶ್ರೀ ಸಿದ್ದಾರ್ಥ ಆಸ್ಪತ್ರೆಯ ವೈದ್ಯರಾದ ಪುಷ್ಪಾಂಜಲಿ ಮಾತನಾಡಿ ವೈದ್ಯಕೀಯ ವೃತ್ತಿ ಎಂಬುದು ಸೇವಾ ಹಿನ್ನಲೆಯಲ್ಲಿ ಮಾನವೀಯ ಕಳಕಳಿಯಿಂದ ರೋಗಿಗಳಿಗೆ ಚಿಕಿತ್ಸೆ ನೆಡೆಯುವ ಒಂದು ವೃತ್ತಿ ಆಗಬೇಕೆ ವಿನಹ ವ್ಯಾಪಾರವಾಗಬಾರದು , ವೈದ್ಯರಾದವರು ರೋಗಿಯ ಚಿಕಿತ್ಸೆಯಲ್ಲಿಯೇ ನೆಮ್ಮದಿ ಪಡೆಯಬೇಕು ಎಂದು ಅಭಿಪ್ರಾಯ ಪಟ್ಟರು.

   ಅರಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಕಲಾ ರಾಜಣ್ಣ ಮಾತನಾಡಿ ಪ್ರತಿ ಗ್ರಾಮಗಳಲ್ಲಿಯೂ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇಲ್ಲದೆ ಬಹಳಷ್ಟು ರೋಗಗಳಿಂದ ಸಾರ್ವಜನಿಕರು ಬಳಲುತ್ತಿದ್ದು, ಬಿಪಿ, ಶುಗರ್ , ಹಲ್ಲಿನ ಸಮಸ್ಯೆ, ಕಣ್ಣಿನ ಸಮಸ್ಯೆ, ಗರ್ಭಕೋಶ ಸಮಸ್ಯೆ, ಬಹಳಷ್ಟು ವೃದ್ಧಾಪ್ಯ ವರ್ಗ ದೃಷ್ಟಿದೋಷದಿಂದ ಶಸ್ತ್ರ ಚಿಕಿತ್ಸೆ ಪಡೆಯಲಾಗದೆ ದೃಷ್ಟಿ ಹೀನತೆಯಿಂದ ಬಳಲುತ್ತಿದ್ದು ಮತ್ತಷ್ಟು ಬಡ ಜನತೆ ಕನ್ನಡಕಗಳ ಕೊರತೆಯಿಂದ ಬಳಲುತ್ತಿರುವುದು ಇಂತಹ ಉಚಿತ ತಪಾಸಣಾ ಶಿಬಿರಗಳು ಸಾರ್ವಜನಿಕರಿಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಮನವಿ ಮಾಡಿಕೊಂಡರು.

   ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಿಡಿಒ ಪೃಥ್ವಿಬಾ, ಉಪಾಧ್ಯಕ್ಷರಾದ ಮಂಜುಳಾಬಾಯಿ, ಸದಸ್ಯರುಗಳಾದ ರಾಮಕೃಷ್ಣಯ್ಯ, ಹಿರಿಯ ಮುಖಂಡರಾದ ನಾಗರಾಜಪ್ಪ, ಮುಖಂಡ ಮಂಜುನಾಥ್ , ಮುಖ್ಯ ಶಿಕ್ಷಕಿ ಅನಸೊಯಾದೇವಿ, ಪರಿವರ್ತನ ಸಂಸ್ಥೆಯ ಶಿವಕುಮಾರ್, ಲಂಬಾಣಿ ಸಂಘದ ಅಧ್ಯಕ್ಷ ಲಕ್ಷ್ಮಣ್, ಸಿ ಆರ್ ಪಿ ಎಫ್ ನಾಯಕ್ ಕೃಷ್ಣ ನಾಯಕ್, ವೈದ್ಯರಾದ ರೆಹನ್, ಅಸೂತ್, ಮೇಘನಾ, ಮಂಜುಶ್ರೀ, ಪ್ರೇರಣ ಸದಸ್ಯರುಗಳಾದ ಲಕ್ಷ್ಮಿ, ಮಂಜುನಾಥ್, ರೂಪಕಲಾ ಮಲ್ಲೇಶ್ ಕೆ, ಹೊನ್ನೇಶ್, ಲಕ್ಷ್ಮಮ್ಮ, ಬಾಲಕೃಷ್ಣ, ಪರಿವರ್ತನಾ ಶಿವಕುಮಾರ್, ಚಂದ್ರಶೇಖರ್ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link