ಶ್ರೀನಗರ :
ಜಮ್ಮು ಮತ್ತು ಕಾಶ್ಮೀರದ ಖೋನ್ಮೋಹ್ ಪ್ರದೇಶದ ಆರ್ಮಿ ಡಿಪೋನಲ್ಲಿ ಸೇನಾ ಅಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಲೆಫ್ಟಿನೆಂಟ್ ಕರ್ನಲ್ ಸುದೀಪ್ ಭಗತ್ ಆತ್ಯಹತ್ಯೆ ಮಾಡಿಕೊಂಡ ಅಧಿಕಾರಿ ಎಂದು ತಿಳಿದುಬಂದಿದ್ದು, ಇತ್ತೀಚೆಗೆ ಆರ್ಮಿ ಡಿಪೋಗೆ ವರ್ಗಾಯಿಸಲಾಗಿತ್ತು.
ಗುಂಡು ಹಾರಿಸಿಕೊಳ್ಳಲು ಬಲವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಅಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/03/army-dead.jpg)