ಹರಿಹರ:
ವಿವಿಧ ಠಾಣಾ ವ್ಯಾಪ್ತಿಯ 10 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಎರಡು ತಂಡಗಳ 11 ಆರೋಪಿತರನ್ನು ಬಂಧಿಸಿ ನಗ, ನಾಣ್ಯ ಹಾಗೂ ವಾಹನವೊಂದನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಡಿಎಸ್ಪಿ ಕನಿಕಾ ಸಿಕ್ರಿವಾಲ್ ಮಾತನಾಡಿ, ಮಲೆಬೆನ್ನೂರು ಠಾಣಾ ವ್ಯಾಪ್ತಿಯ ಕಡಾರನಾಯಕನಹಳ್ಳಿ, ಕುಣಿಬೆಳೆಕೆರೆ, ನಿಟ್ಟೂರು, ಎಕ್ಕೆಗೊಂದಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗುತ್ತೂರು, ಕೊಂಡಜ್ಜಿ, ಚನ್ನಗಿರಿ ಠಾಣಾ ವ್ಯಾಪ್ತಿಯ ಲಿಂಗದಹಳ್ಳಿ ಸೇರಿದಂತೆ ಒಟ್ಟು 8 ಕಳ್ಳತನ ಪ್ರಕರಣ ಬೇಧಿಸಲಾಗಿದೆ.
ಆರೋಪಿಗಳಾದ ಕಿರಣ್ ಜೆ.ಎಸ್. ಗೇಂಡೆ, ನಾಗರಾಜ ಯಳವ, ಮೌನೇಶ್ಚಾರಿ, ಸಿರಾಜ್, ಡಿ.ಜಿ.ಮಂಜುನಾಥ್ ವಾಲಿಬುಡ್ಡಾ, ಸುಭಾಷ್ ಎಂ.,ಎನ್. ಮತ್ತು ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ದಸ್ತಗಿರಿ ಮಾಡಲಾಗಿದೆ. ಇವರಿಂದ 3 ಲಕ್ಷ ರೂ. ಮೌಲ್ಯದ 65 ಗ್ರಾಂ ಬಂಗಾರದ ಆಭರಣ, 1470 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ2: ನಗರದ ಜೈಭೀಮನಗರದ ಮೇಕೆ ಕಳ್ಳತನ ಆರೋಪಿ ಮೊಹಮ್ಮದ್ ಆಸಿಫ್, ರಾಜನಹಳ್ಳಿ ಕುರಿ ಕಳ್ಳತನ ಸಂಬಂಧಿಸಿ ಚಾಂದ್ ಪೀರ್, ರಾಜ್ ಅಹ್ಮದ್, ಸೈಯದ್ ಅಲಿ ಎಂಬುವರನ್ನು ಬಂಧಿಸಿ ಕುರಿ, ಮೇಖೆ ಮಾರಾಟ ಮಾಡಿ ಇಟ್ಟುಕೊಂಡಿದ್ದ 74 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 2.50 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ವಾಹನ ಜಪ್ತಿ ಮಾಡಲಾಗಿದೆ ಎಂದರು.
ಎಸ್ಪಿ ರಿಷ್ಯಂತ್, ಎಎಸ್ಪಿ, ರಾಜೀವ್ ಎಂ. ಹಾಗೂ ತಮ್ಮ ಮಾರ್ಗದರ್ಶನದಲ್ಲಿ ಸಿಪಿಐ ಸತೀಶ್ ಕುಮಾರ್ ಯು. ನೇತೃತ್ವದಲ್ಲಿ ಪ್ರೊಬೇಷನರಿ ಡಿಎಸ್ಪಿ ಭೂತೇಗೌಡ, ಪಿಎಸ್ಐಗಳಾದ ವೀರಬಸಪ್ಪ ಕುಸಲಾಪುರ, ರವಿಕುಮಾರ್ ಡಿ., ಸುನೀಲ್ ಬಿ.ತೇಲಿ, ಲತಾ ವಿ.ತಾಳೇಕರ್, ಎಎಸ್ಐ ಯಾಸೀನ್ ಉಲ್ಲಾ, ಸಿಬ್ಬಂದಿಗಳಾದ ರಾಜಶೇಖರ್ ಎ.ಬಿ., ಸೈಯದ್ ಗಫಾರ್, ಶಿವಕುಮಾರ್ ಕೆ., ಫೈರೋಜ್ ಖಾನ್, ವೆಂಕಟರಮಣ, ನಾಗರಾಜ್ ಸುಣಗಾರ್, ಶಿವರಾಜ್ ಎಂ.ಎಸ್., ಮೊಹ್ಮದ್ ಇಲಿಯಾಸ್ಮ ನಾಗರಾಜ್, ಶಿವಕುಮಾರ್, ಸಿದ್ದಪ್ಪ ಹಾಗೂ ಇತರರು ಪ್ರಕರಣ ಬೇದಿಸಲು ಶ್ರಮಿಸಿದ್ದಾರೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
