ಬೆಂಗಳೂರು :
ಆಶ್ವಿನಿ ಪುನೀತ್ ರಾಜ್ ಕುಮಾರ್ ಇವರಿಂದ ಪಾಟಂಟೌನ್ ಮೆಟ್ರೋ ಸ್ಟೇಷನ್ಗೆ ಪುನೀತ್ ರಾಜ್ಕುಮಾರ್ ಹೆಸರಿಡುವಂತೆ ನಡೆಯುತ್ತಿರುವ ಆಂದೋಲನದ ಡಾಕುಮೆಂಟರಿ ಬಿಡುಗಡೆ
ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ಕರ್ನಾಟಕದ ಮನೆ ಮನಗಳಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತಿರುವ ಹೆಸರು. ತಮ್ಮ ಸಾಮಾಜಿಕ ಕಳಕಳಿ, ದೀನದಲಿತರ ಮತ್ತು ಮಕ್ಕಳ ಏಳಿಗೆಗಾಗಿ ಸದ್ದಿಲ್ಲದೇ ಕೈಗೊಂಡ ಯೋಜನೆಗಳು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸಮಾಜಕ್ಕೆ ಆದರ್ಶ ಶಕ್ತಿಯಾಗಿರುವ ಅವರ ನಗು ಮುಖವನ್ನು ಕನ್ನಡಿಗರೆಂದಿಗೂ ಮರೆಯಲು ಸಾಧ್ಯವಿಲ್ಲ.
ಅವರು ಕನ್ನಡದ ಆಸ್ಮಿತೆ ಮತ್ತು ಕನ್ನಡಿಗರ ರಾಜರತ್ನ, ಯುವಕರ ಮತ್ತು ವಿದ್ಯಾರ್ಥಿಗಳ ಪಾಲಿನ ಯುವರತ್ನ, ಅವರ ಸ್ಮರಣಾರ್ಥವಾಗಿ ಪುಲಕೇಶಿನಗರ ವಿಧಾನಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಪಾಟರಿಟೌನ್ ಮೆಟ್ರೋ ಸ್ಟೇಷನ್ಗೆ ಪುನೀಶ್ ರಾಜ್ ಕುಮಾರ್ ಹೆಸರಿಡುವಂತೆ ಆಗ್ರಹಿಸಿ ಕರ್ನಾಟಕ ಬಹುಜನ ಫೆಡರೇಷನ್ ಅಧ್ಯಕ್ಷರಾದ ಜಿ.ಹೆಚ್.ಶಂಕರ್ ಇವರ ನಾಯಕತ್ವದಲ್ಲಿ 2022ರಿಂದ ಸತತವಾಗಿ ಆಂದೋಲನ ನಡೆಯುತ್ತಿದೆ.
ಈ ಕುರಿತು ದೇಶದ ಪ್ರಧಾನ ಮಂತ್ರಿಗಳಿಂದ ಹಿಡಿದು ರಾಜ್ಯದ ಹಿಂದಿನ ಮತ್ತು ಇಂದಿನ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಉಪ ಮುಖ್ಯಮಂತ್ರಿಗಳಿಗೆ, ಅನೇಕ ಶಾಸಕರಿಗೆ, ಸಂಸದರಿಗೆ ಹಾಗೂ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ಎಲ್ಲರಿಂದಲೂ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಇನ್ನೂ ಸರ್ಕಾರದವತಿಯಿಂದ ಅಧಿಕೃತ ತೀರ್ಮಾನ ಹೊರಬಿದಿಲ್ಲ.
ಪಾಟಂಟೌನ್ ಮೆಟ್ರೋ ಸ್ಟೇಷನ್ಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಆಗ್ರಹಿಸಿ ಕರ್ನಾಟಕ ಬಹುಜನ ಫೆಡರೇಷನ್ ನಿರಂತರವಾಗಿ ನಡೆಸುತ್ತಿರುವ ಅಂದೋಲನದ ಕುರಿತು ಡಾಕುಮೆಂಟೇಷನ್ ಮಾಡಿದ್ದು, ಅದನ್ನು ಡಾಕುಮೆಂಟರಿ ರೂಪದಲ್ಲಿ ತಂದಿದೆ. ಸದರಿ ಡಾಕುಮೆಂಟರಿ ಬಿಡುಗಡೆ ಮಾಡುವಂತೆ ಆಶ್ವಿನಿ ಪುನೀತ್ ರಾಜ್ ಕುಮಾರ್ ಇವರನ್ನು ಕೋರಿಕೊಳ್ಳಲಾಗಿ, ಇಂದು ಅದನ್ನು ಬಿಡುಗಡೆ ಮಾಡಿ ಕರ್ನಾಟಕ ಬಹುಜನ ಫೆಡರೇಷನ್ ಸಮಾಜ ಮುಖಿಯಾಗಿ ಮಾಡುತ್ತಿರುವ ಕಾರ್ಯಗಳನ್ನು ಪಾಟಂಟೌನ್ ಮೆಟ್ರೋ ಸ್ಟೇಷನ್ಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ನಡೆಸುತ್ತಿರುವ ಆಂದೋಲನ ಯಶಸ್ವಿಯಾಗಲಿ, ಪುನೀತ್ ರಾಜ್ ಕುಮಾರ್ ಸಮಸ್ತ ಕನ್ನಡಿಗರ ಸ್ವತ್ತು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ವಂಶಸ್ಥರಾದ ವಾಸು, ಕರ್ನಾಟಕ ಬಹುಜನ ಫೆಡರೇಷನ್ ಅಧ್ಯಕ್ಷರಾದ ಜಿ.ಹೆಚ್.ಶಂಕರ್ ಮತ್ತು ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಮಾಜಿ ಅಧ್ಯಕ್ಷರೂ ಮತ್ತು ಸಾಮಾಜಿಕ ಪರಿವರ್ತನಾ ಜನಾಂದೋಲನದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೈ.ಮರಿಸ್ವಾಮಿ ಹಾಗೂ ಡಾ.ರಾಜ್ ಕುಮಾರ್ ರಂಗಭೂಮಿ ಚಲನಚಿತ್ರ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷರಾದ ಕನ್ನಡ ರಾಜು ಎಂ.ಆರ್ ಇವರುಗಳು ಉಪಸ್ಥಿತರಿದ್ದರು.
