ಹರಪನಹಳ್ಳಿ :
ಏಷಿಯನ್ ಯೋಗ ಪೆಡರೇಷನ್ ವತಿಯಿಂದ ಕೇರಳದಲ್ಲಿ ಸೆ.27 ರಿಂದ 30 ರವರೆಗೆ ನಡೆಯುವ ಏಷಿಯನ್ ಯೋಗ ಚಾಂಪಿಯನ್ ಶಿಪ್ ಗೆ ತಾಲೂಕಿನ ಕೊಂಗನಹೊಸೂರು ಗ್ರಾಮz ವಿದ್ಯಾರ್ಥಿ ಎಚ್ .ಎಂ.ನವೀನಕುಮಾರ ಆಯ್ಕೆಯಾಗಿದ್ದಾರೆ.
ನವೀನಕುಮಾರ ಬಳ್ಳಾರಿ ಯಲ್ಲಿ ಬಿಎಎಂಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, 8ನೇ ತರಗತಿಯಿಂದ ಯೋಗ ಅಭ್ಯಾಸ ಮಾಡುತ್ತಿದ್ದಾನೆ. ದಾವಣಗೆರೆಯ ಯೋಗ ಶಿಕ್ಷಕ ಅಜ್ಜಪ್ಪ ನವರು ಈತನಿಗೆ ಯೋಗ ಶಿಕ್ಷಣ ಕಲಿಸುವ ಗುರುಗಳಾಗಿದ್ದಾರೆ.
ಈತನು 2 ಬಾರಿ ರಾಷ್ಟ್ರೀಯ, 2 ಬಾರಿ ಅಂತರಾಷ್ಟ್ರೀಯ ಯೋಗ ಸ್ಪರ್ದೆಯಲ್ಲಿ ಪಾಲ್ಗೊಂಡು ಒಂದು ಬಂಗಾರ ಹಾಗೂ ಒಂದು ಕಂಚು ಪದಕ ಪಡೆದಿದ್ದಾನೆ. ಕೇರಳದಲ್ಲಿ ನಡೆಯುವ ಏಷಿಯನ್ ಯೋಗ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದಿಂದ 3 ಹುಡುಗರು ಹಾಗೂ ಇಬ್ಬರು ಹುಡಿಗಿಯರು ಪಾಲ್ಗೊಳ್ಳಲಿದ್ದು, ಅದರಲ್ಲಿ 21 ವರ್ಷದ ಒಳಗಿನ ಸ್ಪರ್ದೆಯಲ್ಲಿ ನವೀನಕುಮಾರ ಏಕೈಕ ರಾಜ್ಯದ ಸ್ಪರ್ದಾಳು.
ಈತನ ಸಾಧನೆಗೆ ತಂದೆ ಎಚ್ .ಎಂ. ನಾಗರಾಜ ಹಾಗೂ ತಾಯಿ ರೇಣುಕಾ ಸಾಕಷ್ಟು ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಅಂತರಾಷ್ಚ್ರೀಯ ಯೋಗ ಸ್ಪರ್ದೆಗೆ ಆಯ್ಕೆಯಾಗಿರುವ ಈತನಿಗೆ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಹೇಮಣ್ಣ ಮೋರಗೇರಿ, ಕಾರ್ಯದರ್ಶಿ ವೀರಭದ್ರಪ್ಪ ಅಭಿನಂದಿಸಿ ಶುಭಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
