ತುಮಕೂರು:
ಸಮಗ್ರ ವ್ಯಕ್ತಿತ್ವ ಬೆಳವಣಿಗೆಯಿಂದಷ್ಟೇ ಸಮಾಜ ಹಾಗೂ ರಾಷ್ಟ್ರಗಳ ಔನ್ನತ್ಯ. ಈ ನಿಟ್ಟಿನಲ್ಲಿ ಯುವಜನತೆ ಬದುಕಿನಲ್ಲಿ ಉತ್ತಮ ಗುರಿಯನ್ನು ನಿರ್ಧರಿಸಿಕೊಂಡು ಯೋಗ್ಯ ಪಥದಲ್ಲಿ ಸಾಗುವುದರೊಂದಿಗೆ ಗುರಿ ತಲುಪಬೇಕು. ಗುರಿ ಸಾಧನೆಗೆ ರಾತ್ರಿಯೆಲ್ಲಾ ಜಾಗರಣೆ ಅವಶ್ಯಕವಿಲ್ಲ. ಜಾಗೃತಿಯಿಂದ ಇದ್ದರೆ ಸಾಕು ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತುಮಕೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿವೇಕ ಮಂಥನ ಉಪನ್ಯಾಸ ಸರಣಿಯ ಚೊಚ್ಚಲ ಪ್ರವಚನವನ್ನು ‘ಯುವಕರ ಮುಂದಿರುವ ಸವಾಲುಗಳು; ಸರಿಯುತ್ತರ’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ್ಜಿ.ಟಿ. ಅಧ್ಯಕ್ಷೀಯ ನುಡಿಗಳನ್ನಾಡಿದರು. ವಿವೇಕಾನಂದರ ಅಧ್ಯಯನ ನಮ್ಮನ್ನು ಶಕ್ತಿವಂತರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ನಿವೇದಿತಾ ನಿಕೇತನದಿಂದ ಆಯೋಜಿಸಿದ್ದ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮತ್ತು ಅಧ್ಯಯನ ಕೇಂದ್ರವು Iಕಿಂಅ ಸಹಯೋಗದಲ್ಲಿ ಆಯೋಜಿಸಿದ್ದ ಮತ್ತು ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ವಿವೇಕ ಕಲೋತ್ಸವ’ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕು.ಮಹಿಮಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕು.ವರ್ಷಿಣಿ ಸ್ವಾಗತಿಸಿದರು. ಕು.ಶ್ರೇಯ ವಂದಿಸಿದರು. ಕು.ಕಾವ್ಯ ಬಿ.ಎಸ್.ನಿರೂಪಿಸಿದರು. ಉಮಾ ಮಹೇಶ್, ಕಡಬಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
