ಬೆಂಗಳೂರು : ಹೆಚ್ಚಿನ ಪ್ರದೇಶಗಳಿಗೆ ನಾಳೆ ಕಾವೇರಿ ನೀರು ಪೂರೈಕೆ ಸ್ಥಗಿತ

ಬೆಂಗಳೂರು

    ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಆದಷ್ಟು ಬೇಗ ಬೆಂಗಳೂರಿನ ಮತ್ತಷ್ಟು ಪ್ರದೇಶಗಳಿಗೆ ನೀರು ಪೂರೈಕೆ ಮಾಡಬೇಕೆಂಬ ತರಾತುರಿಯಲ್ಲಿ ಜಲಮಂಡಳಿ ಇದೆ. ಈ ಮಧ್ಯೆ, 5ನೇ ಹಂತದ ಯೋಜನೆಯ ಕೊಳವೆಯನ್ನು ಹೆಗ್ಗನಹಳ್ಳಿಯ ನೆಲಮಟ್ಟದ ಸಂಗ್ರಹಗಾರಕ್ಕೆ ಜೋಡಿಸುವ ಕಾಮಗಾರಿ ಕೈಗೊಂಡಿರುವ ಕಾರಣ ಸೆಪ್ಟೆಂಬರ್ 21ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    ನೀರು ಪೂರೈಕೆ ವ್ಯತ್ಯಯ ಮತ್ತು ಸ್ಥಗಿತವಾಗುವ ಪ್ರದೇಶಗಳ ಬಗ್ಗೆ ಬೆಂಗಳೂರು ಜಲಮಂಡಳಿ ಪ್ರಕಟಣೆ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.

    ಕಾವೇರಿ 5ನೇ ಹಂತದ 700 ಮಿ.ಮೀ. ಕೊಳವೆ ಮಾರ್ಗವನ್ನು ಹೆಗ್ಗನಹಳ್ಳಿಯ ನೆಲ ಮಟ್ಟದ ಸಂಗ್ರಹಾಗಾರಕ್ಕೆ ಜೋಡಿಸುವ ಕಾಮಗಾರಿಯನ್ನು ಸೆಪ್ಟೆಂಬರ್ 21ರ ಶನಿವಾರ ಕೈಗೊಳ್ಳಲಾಗುತ್ತಿದೆ. ಇದರಿಂದ ಶನಿವಾರ ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ಕಾವೇರಿ 4ನೇ ಘಟ್ಟದ 2ನೇ ಫೇಸ್‌ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.

    ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪ್ರಕಾಶನಗರ, ನಂದಿನಿ ಲೇಔಟ್, ಗೊರಗುಂಟೆಗುಂಟೆ ಪಾಳ್ಯ, ಕೃಷ್ಣಾನಂದನಗರ, ಶಂಕರ ನಗರ, ಕಂಠೀರವನಗರ, ಮಹಾಲಕ್ಷ್ಮಿ ಲೇಔಟ್, ಸರಸ್ವತಿನಗರ, ಗಣೇಶ ಬ್ಲಾಕ್, ರಾಜಾಜಿನಗರದ ಎಲ್ಲಾ ಪ್ರದೇಶಗಳು, ರಾಜಗೋಪಾಲನಗರ, ಜಿಕೆಡಬ್ಲ್ಯೂ ಲೇಔಟ್, ಲಕ್ಷ್ಮಿ ದೇವಿನಗರ, ಚಾಮುಂಡಿ ಪುರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್ ಎಂಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್, ಲೇಔಟ್, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತನಗರ, ಕಮ್ಮಗೊಂಡನ ಹಳ್ಳಿ ಭುವನೇಶ್ವರಿನಗರ, ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಪೈನ್ ರಸ್ತೆ, ಶ್ರೀನಿವಾಸನಗರ, ಹೋಯಳನಗರ, ಸಂಜೀವಿನಿನಗರ, ಲಕ್ಷ್ಮಣನಗರ, ಶ್ರೀ ಗಂಧನಗರ, ಮಯೂರನಗರ, ಶಿವಾನಂದ ನಗರ, ಫ್ರೆಂಡ್ಸ್ ಸರ್ಕಲ್, ಎಜಿಪಿ ಲೇಔಟ್, ಚಿಕ್ಕಸಂದ್ರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಕೆ.ಪಿ.ಅಗ್ರಹಾರ. ಚೆನ್ನಪ್ಪ ಗಾರ್ಡನ್, ಗಾಣಪ್ಪ ಲೇಔಟ್, ಮಂಜುನಾಥನಗರ, ಚೌಡರಪಾಳ, ವಿದ್ಯಾರಣ್ಯನಗರ ಮಾರೇನಹಳ್ಳಿ 20ನೇ ಮೇನ್, ಕೆಎಚ್‌ಬಿ ಕ್ವಾರ್ಟರ್ಸ್, ಹೌಸಿಂಗ್ ಬೋರ್ಡ್ ಕಾರ್ಪೋರೇಷನ್ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ.ಲೇಔಟ್, ಮೂಡಲಪಾಳ್ಯ, ನಾಗಾಪುರ, ಅಗ್ರಹಾರ ದಾಸರಹಳ್ಳಿ ರಾಜಾಜಿನಗರ 6ನೇ ಬ್ಲಾಕ್, ವೆಸ್ಟ್ ಆಫ್ ಕಾರ್ಡ್ ರೋಡ್, ಇಂದಿರ ನಗರ ಕೊಳಗೇರಿ, ಕೆಎಚ್‌ ಬಿ ಕಾಲೋನಿ, ಮಹಾಗಣಪತಿನಗರ, ಶಿವನಹಳ್ಳಿ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. 

   ಶಿವಪುರ, ನೆಲಗದರನಹಳ್ಳಿ ಐಪಿನಗರ, ದೊಡ್ಡಣ್ಣ ಕೈಗಾರಿಕಾ ಪ್ರದೇಶ, ರಾಮಯ್ಯ ಲೇಔಟ್, ಜೈಭುವನೇಶ್ವರಿನಗರ, ಸಂಜಯ ಗಾಂಧಿ ನಗರ, ಮಲ್ಲಸಂದ್ರ, ರವೀಂದ್ರ ನಗರ, ಸಂತೋಷ್‌ ನಗರ, ಬಿಎಚ್​​​ಇಎಲ್ ಕಾಲೋನಿ, ಬಾಬಣ್ಣ ಲೇಔಟ್, ಕಲ್ಯಾಣ ನಗರ, ಶನಿಮಹಾತ್ಮ ದೇವಸ್ಥಾನ, ಹಾವ ನೂರು ಲೇಔಟ್, ಡಿಫೆನ್ ಕಾಲೋನಿ, ಶಂಕ್ರಪ್ಪ ಗಾರ್ಡನ್, ಗೋಪಾಲಪುರ, ಕಾವೇರಿಪುರ, ರಂಗನಾಥಪುರ, ಬಿಡಿಎ ಲೇಔಟ್, ರಾಜೀವ್ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರನಗರ, ಮೂಡಲ ಪಾಳ್ಯ, ಎಂಟಿ ಲೇಔಟ್, ಮಾರೇನಹಳ್ಳಿ, ಜಿಕೆಡಬ್ಲ್ಯೂ ಲೇಔಟ್, ವಿನಾಯಕ.

   ಲೇಔಟ್, ಮಾರುತಿ ಮಂದಿರ, ಶಿವಾನಂದ ನಗರ, ಕೋಮಲನಗರ, ವಿಶ್ವಭಾರತಿ ನಗರ, ಸಣ್ಣಕ್ಕೆ ಬಯಲು, ಕಾಮಾಕ್ಷಿಪಾಳ್ಯ, ರಾಗಿನಗರ, ಶಕ್ತಿಗಣಪತಿ ನಗರ, ಬಿಎಚ್ ಇಎಲ್ ಲೇಔಟ್, ಕನ್ನಹಳ್ಳಿ, ಐಡಿಎಲ್ ಹೋಮ್ ಟೌನ್‌ಶಿಪ್, ಮೈಲಾಸಂದ್ರ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಟೌನ್, ಬಂಡೇ ಮಠ, ಕೆಂಗೇರಿ ಪೋರ್ಟ್, ಸ್ವಾತಿ ಲೇಔಟ್, ಕೋಡಿವಾಳ, ವಿಜಯ ಲೇಔಟ್, ಭುವನೇಶ್ವರನಗರ, ಜ್ಞಾನ ಭಾರತಿ, ದುಬಾಸಿಪಾಳ್ಯ, ನಾಗದೇವನ ಹಹ್ ಅನ್ನಪೂರ್ಣೇಶ್ವರಿನಗರ, ಜ್ಞಾನ ಗಂಗಿನಗರ, ರೈಲ್ವೆ ಲೇಔಟ್, ಎಂಪಿಎಂ ಲೇಔಟ್, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್, ನಾಗರಬಾವಿ, ಎನ್ ಜಿಇಎಫ್ ಲೇಔಟ್, ಟೆಲಿಕಾಂ ಲೇಔಟ್ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

 

Recent Articles

spot_img

Related Stories

Share via
Copy link
Powered by Social Snap