ಬರಗೂರು :
ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಶಿರಾ ತಾಲ್ಲೂಕು ಬರಗೂರು ಗ್ರಾಮದ ಶ್ರೀಲಕ್ಷ್ಮೀ ದೇವಸ್ಥಾನದ ಹತ್ತಿರ ಜರುಗಿದೆ.
ಗುರುವಾಗ ಸಂಜೆ ಹಠಾತ್ತನೆ ಮೋಡಕವಿದ ವಾತಾವರಣ ಮೂಡಿ ಗಾಳಿ, ಗುಡುಗು, ಮಿಂಚಿನಿಂದ ಮಳೆ ಪ್ರಾರಂಭವಾಯಿತು. ಆಗ ಇದ್ದಕ್ಕಿದ್ದಂತೆ ಸಿಡಿಲಿನ ಆರ್ಭಟವು ಗ್ರಾಮಸ್ಥರಲ್ಲಿ ನಡುಕ ಉಂಟು ಮಾಡಿತು. ಗ್ರಾಮದಲ್ಲೇ ಸಿಡಿಲು ಬಡಿದಿರಬಹುದೆಂದು ಸಿಡಿಲಿನ ಘೋರ ಶಬ್ದದಿಂದ ಅರಿವಾಯಿತು. ಸ್ವಲ್ಪ ಹೊತ್ತಿಗೆ ಗ್ರಾಮದ ಶ್ರೀಲಕ್ಷ್ಮೀ ದೇವಸ್ಥಾನದ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಉರಿಯುವುದು ಗೋಚರವಾಯಿತು. ತಕ್ಷಣವೆ ಮಳೆ ಬೇರೆ ನಿಂತು ಹೋಯಿತು. ಹಗಾಗಿ ಅಕ್ಕಪಕ್ಕದಲ್ಲಿದ್ದ ಜನರು ತೆಂಗಿನ ಮರಕ್ಕೆ ನೀರು ಎರಚಿ ಬೆಂಕಿ ನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ