ಬರಗೂರು :
ಕುಗ್ರಾಮದ ಹಿರಿಯಜ್ಜನ ಮನೆ ಬಾಗಿಲಿಗೆ ಬಂದು ಮಾಸಾಶನ ಮಂಜೂರಾತಿ ಪತ್ರ ನೀಡಿ, ಶತಾಯುಷಿಗೆ ಗೌರವ ಸಮರ್ಪಿಸಿ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಮೂಡ್ಲೇನಹಳ್ಳಿ ಗ್ರಾಮದ ರಾಮಜ್ಜ 110 ವರ್ಷ ವಯಸ್ಸು ಕಳೆದರೂ ಉತ್ತಮ ಆರೋಗ್ಯ ಹೊಂದಿರುವ ಹಿರಿಯ ಜೀವ. ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಎಡತಾಕುವ ಇಂದಿನ ಪರಿಸ್ಥಿತಿಯಲ್ಲಿ ರಾಮಜ್ಜನ ವಯಸ್ಸಿನ ಬಗ್ಗೆ ಎಲ್ಲರಿಗೂ ಅಚ್ಚರಿಯೆ. ಶ್ರಮದ ಜೀವನ, ಸಾವಯವ ಗೊಬ್ಬರ ಬಳಸಿ ಬೆಳೆಯುತ್ತಿದ್ದ ದವಸ ಧಾನ್ಯಗಳಿಂದ ತಯಾರು ಮಾಡಿದ ರಾಗಿ ಮುದ್ದೆ, ನೆಲ್ಲಕ್ಕಿ ಅನ್ನ ತಿಂದು ನಿತ್ಯ ಕೃಷಿಯಲ್ಲಿ ತೊಡಗಿ ಕೊಳ್ಳುತ್ತಿದ್ದ ಕಾರಣ, ರಾಮಜ್ಜ ಶತಾಯುಷಿಯಾಗಿ ಬದುಕು ಮುಂದುವರೆಸಲು ಸಾಧ್ಯವಾಗಿದೆ.
110 ವರ್ಷ ಕಳೆದರೂ ಹಿಂದಿನ ಸರ್ಕಾರಗಳು ರಾಮಜ್ಜನಂತಹ ಶತಾಯುಷಿಯನ್ನು ಗುರ್ತಿಸಿ ಮಾಶಾಸನ ನೀಡಿರಲಿಲ್ಲ. ಮೂಡ್ಲೇನಹಳ್ಳಿ ಗ್ರಾಮದವರು ಶತಾಯುಷಿ ಬಗ್ಗೆ ಶಾಸಕ ರಾಜೇಶ್ಗೌಡರವರ ಗಮನಕ್ಕೆ ತಂದರು. ಸುದ್ದಿ ತಿಳಿದ 24 ಗಂಟೆಯಲ್ಲಿ ಸ್ವತಹ ಶಾಸಕರೆ ತಕ್ಷಣ ಕಾರ್ಯಪ್ರವೃತ್ತರಾಗಿ ಮೂಡ್ಲೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾಸಾಶನ ಮಂಜೂರು ಪತ್ರ ನೀಡಿ ಗೌರವಿಸಿದರು. ಈ ಬಗ್ಗೆ ಮಾತನಾಡಿದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಭಾರತೀಯ ಸಾಂ ತಿಕ ಪರಂಪರೆಯಲ್ಲಿ ಹಿರಿಯರಿಗೆ ಗೌರವ ಕೊಡುವುದನ್ನು ನಮ್ಮ ಪೂರ್ವಜರು ಕಲಿಸಿದ್ದಾರೆ. ದೈವ ಸ್ವರೂಪಿಗಳಾದ ಇಂತಹ ಶತಾಯುಷಿಗಳನ್ನು ನಾವು ನೋಡುತ್ತಿರುವುದು ನಮ್ಮ ಪುಣ್ಯ. ಸದಾ ಕಾಲಕ್ಕೂ ಎಲ್ಲರನ್ನೂ ಗೌರವ ಪೂರಕವಾಗಿ ನೋಡಿ ಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ