ಬೆಳಗಾವಿಗೆ ಸಿಗಲಿದೆ ಮತ್ತೊಂದು ಹೆಮ್ಮೆಯ ಗರಿ ….!

ಬೆಳಗಾವಿ

    ಅಂದುಕೊಂಡಂತೆ ಎಲ್ಲವೂ ನಡೆದರೆ ಬೆಳಗಾವಿ  ಕರ್ನಾಟಕದ ಮೊಟ್ಟ ಮೊದಲ “ಕತ್ತೆಕಿರುಬ ಸಂರಕ್ಷಿತ ಪ್ರದೇಶ”  ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಕತ್ತೆಕಿರುಬು ಸಂರಕ್ಷಿತ ಅಭಯಾರಣ್ಯಗಳಿವೆ. ಈ ಅಭಯಾರಣ್ಯಗಳಲ್ಲಿ ಕತ್ತೆಕಿರುಬಗಳ ಜೊತೆಗೆ ತೋಳ, ಕೃಷ್ಣಮೃಗಗಳನ್ನು ಕೂಡ ಸಂರಕ್ಷಿಸಲಾಗುತ್ತಿದೆ.

   ರಾಜ್ಯದಲ್ಲೇ ಅತಿ ಹೆಚ್ಚು ಕತ್ತೆಕಿರುಬಗಳು ಬೆಳಗಾವಿ ಜಿಲ್ಲೆಯಲ್ಲಿ ಇವೆ. ಬೆಳಗಾವಿ ಮತ್ತು ಗೋಕಾಕ ತಾಲೂಕಿನ ಗಡಿಯಲ್ಲಿರುವ ಸುಮಾರು 120 ಚಕಿಮೀ ಮೀಸಲು ಅರಣ್ಯವನ್ನು ಕತ್ತೆಕುರುಬ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಬೆಳಗಾವಿ ಅರಣ್ಯಾಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಅಳಿವಿನಂಚಿನಲ್ಲಿರುವ ಕತ್ತೆಕಿರುಬಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಈ ಹಜ್ಜೆ ಇಟ್ಟಿದೆ.

   ಕತ್ತೆಕಿರುಬಗಳು ಕಾಡುಗಳು ಮತ್ತು ಹುಲ್ಲುಗಾವಲುಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ. ಬಾಗಲಕೋಟೆ, ಬೀದರ್​, ಧಾರವಾಡ, ಕೊಪ್ಪಳ, ತುಮಕೂರು, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕತ್ತೆಕಿರುಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆಘಾತಕಾರಿಯಾಗಿದೆ.

   ಸವದತ್ತಿ, ಗೋಕಾಕ್​, ಹುಕ್ಕೇರಿ ಮತ್ತು ಬೆಳಗಾವಿಯ ಎಲೆ ಉದುರುವ ಅರಣ್ಯ ಪ್ರದೇಶಗಳು ಕತ್ತೆಕಿರುಬಗಳ ಆವಾಸ ಸ್ಥಾನಗಳಾಗಿವೆ. ಆದರೆ, ಇತ್ತೀಚಿಗೆ ಇಲ್ಲಿಯೂ ಕೂಡ ಕತ್ತೆಕಿರುಬುಗಳು ಕಾಣಸಿಗುವುದು ಕಡಿಮೆಯಾಗಿದೆ. ಆಗಾಗ, ಈ ಅರಣ್ಯ ಪ್ರದೇಶಗಳಲ್ಲಿ ಕತ್ತೆಕಿರುಬಗಳ ಅವಶೇಷ ಕಂಡು ಬರುತ್ತದೆ. ಮತ್ತು ಈ ಅರಣ್ಯ ಪ್ರದೇಶ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಕತ್ತಕಿರುಬುಗಳು ವಾಹನಗಳಿಗೆ ಹೆದರಿ ಬೇರೆಕಡೆ ಪಲಾಯನ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

   ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜಾ ಡಿ ಮಾತನಾಡಿ, ಕತ್ತೆಕಿರುಬಗಳನ್ನು ಸಂರಕ್ಷಿಸಲು ಬೆಳಗಾವಿ ಉತ್ತಮ ಜಿಲ್ಲೆಯಾಗಿದೆ. 2021 ರಲ್ಲಿ ಕೊಪ್ಪಳದ ಗಂಗಾವತಿ, ತಾವರಗೇರಾ, ಯಲಬುರ್ಗಾ ಮತ್ತು ಸುತ್ತಮುತ್ತಲಿನ ಒಣ ಹುಲ್ಲುಗಾವಲು ಪ್ರದೇಶಗಳನ್ನು ಕತ್ತೆಕಿರುಬ ಸಂರಕ್ಷಣಾ ಪ್ರದೇಶವೆಂದು ಘೋಷಿಸಲು ಪ್ರಯತ್ನವನ್ನು ಮಾಡಲಾಯಿತು. ಆದರೆ, ಸಾಧ್ಯವಾಗಲಿಲ್ಲ ಎಂದರು.

Recent Articles

spot_img

Related Stories

Share via
Copy link