ಕೊರಟಗೆರೆ:
ತುಮಕೂರು ತಾಲ್ಲೂಕು ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಮತ್ತು ತಾಲ್ಲೂಕಿನ ಡಿ.ನಾಗೇನಹಳ್ಳಿ ಸುತ್ತಮುತ್ತಲ ರೈತರ ಶ್ರಮದಿಂದ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯ ಯಶಸ್ಸಿಗೆ ಹಾಗೂ ಕೃಷಿಪದ್ದತಿ ಸಹಕಾರಕ್ಕೆ ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಪಂಚಾಯತ್ ಪ್ರಶಸ್ತಿ ಲಭಿಸಿದೆ.
ಯಾವ ಯೋಜನೆ ಬಯಲು ಸೀಮೆಯ ಮಳೆ ಆಧಾರತ ಖುಷ್ಕಿ ಬೇಸಾಯದ ರೈತರು ಹಲವಾರು ವರ್ಷಗಳಿಂದ ಕೃಷಿ ಅವಲಂಬಿಸಿದ್ದು, ಲಾಭ ಕಾಣದೆ ಸಂಕಷ್ಟ ಸ್ಥಿತಿ ಎದುರಿಸಿಕೊಂಡು ಬದುಕುತ್ತಿದ್ದಾರೆ.
ಇಂತಹ ರೈತರ ಒಣಬೇಸಾಯ ಪದ್ದತಿಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರವು 2011 ರಲ್ಲಿ ಭಾರತೀಯ ಕೃಷಿ ಅಧ್ಯಯನ ಅಡಿಯಲ್ಲಿ ನ್ಯಾಷನಲ್ ಇನ್ವೆನ್ಷನ್ ಇನ್ ಕ್ಲೈಮೆಟ್ ರಿಸರ್ಚ್ (ನಿಕ್ರಾ) ಯೋಜನೆಯನ್ನು ಕಾರ್ಯರೂಪಗೊಳಿಸಿತು.
ಹೈದರಾಬಾದ್ನ ಕೇಂದ್ರೀಯ ಒಣ ಬೇಸಾಯ ಪದ್ದತಿ ಮಾರ್ಗದರ್ಶನದಲ್ಲಿ ದೇ±ದÀ 100 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಯಿತು. ರಾಜ್ಯದಲ್ಲಿ ಮೊದಲು 4 ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭಿಸಲು ಅನುಮತಿ ದೊರೆಯಿತು.
ಪ್ರಸ್ತುತ 10 ಗ್ರಾಮಗಳಲ್ಲಿ ನಡೆಯುತ್ತಿದ್ದರೂ, ಪ್ರಥಮ ಹಂತದಲ್ಲಿ ದಕ್ಷಿಣಕರ್ನಾಟಕದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮವನ್ನು ಮೊದಲು ಪೈಲೆಟ್ ಹಳ್ಳಿಯಾಗಿ ಆರಿಸಿಕೊಳ್ಳಲಾಗಿದೆ.
ಯೋಜನೆ ಅನುಷ್ಠಾನ :
ಈ ಯೋಜನೆಯಡಿ ಹಿರೇಹಳ್ಳಿಯ ಕೃಷಿವಿಜ್ಞಾನಿಗಳು ಗ್ರಾಮದ ಜಮೀನುಗಳಲ್ಲಿ ಮಣ್ಣು ಪರೀಕ್ಷೆ ಮಾಡಿ, ಮಣ್ಣು ನಿರ್ವಹಣೆ, ಸವಕಳಿ ತಡೆಯುವಿಕೆ, ನೀರು ನಿರ್ವಹಣೆ, ಕಡಿಮೆ ನೀರಿನಲ್ಲಿ ಬೆಳೆಯುವ ತಳಿಯ ಬೆಳೆಗಳನ್ನು ರೈತರ ಜೊತೆಗೂಡಿ ಕೃಷಿ ಮಾಡಿಸಿದ್ದಾರೆ.
ಈ ಪ್ರದೇಶದಲ್ಲಿ ಸುಮಾರು 1250 ಎಕರೆ ಖುಷ್ಕಿ ಜಮೀನಲ್ಲಿ 150 ಹೆಕ್ಟೇರ್ ಟ್ರಂಚ್ ನಾಲಾ ಬದುಗಳು, 85 ಕೃಷಿಹೊಂಡ, ಚೆÀಕ್ ಡ್ಯಾಂಗಳ ನಿರ್ಮಾಣ ಹಾಗೂ ಹೊಳೆತ್ತುವಿಕೆ, ಚೆÀಕ್ ಡ್ಯಾಂಗಳಲ್ಲಿ ನೀರು ಸಂಗ್ರಹಿಸಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುವಂತೆ ಮಾಡಲಾಗಿದೆ.
1250 ಎಕರೆ ಜಮೀನಿನ ಪೈಕಿ ಸುಮಾರು 33% ಜಮೀನಿನಲ್ಲಿ ಕೃಷಿ ತೋಟಗಾರಿಕೆ, ಅರಣ್ಯ ಇಲಾಖೆಗಳ ಲಾಭದಾಯಕ ಹುಣಸೆ, ನೇರ¼,É ಹೆಬೇವು, ಗೋಡಂಬಿ, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ಹಲವು ಮರಗಳನ್ನು ಬೆಳೆಸಲಾಗಿದೆ.
ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಬರುವ ಮಳೆಯ ವೈಪರಿತ್ಯವನ್ನು ತಡೆಯುವ ಲಾಭದಾಯಕ ಸಂಶೋಧನೆಯ ನೂತನ ತಳಿಯನ್ನು ಬೆಳೆಸಲಾಗಿದ್ದು ಅಂತರ ಮತ್ತು ಮಿಶ್ರ ಬೆಳೆ ಪದ್ದತಿಗೆ ಒತ್ತು ನೀಡಲಾಗಿದೆ. ಈ ಕೆಲಸಗಳಿಗೆ ಕೃಷಿ ವಿಜ್ಞಾನ ಕೇಂದ್ರ ನಿಕ್ರಾ ಯೋಜನೆಯಲ್ಲಿ ಸುಮಾರು ಒಂದುಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಎಫ್ಪಿಓ- ಡಿ.ನಾಗೇನಹಳ್ಳಿಯಲ್ಲಿ ಸುತ್ತಮುತ್ತಲಿನ ಗ್ರಾಮದ 800 ರೈತರು ಸೇರಿ ಗ್ರಾಮ ಚೇತನ ರೈತ ಉತ್ಪಾದನಾ ಕಂಪನಿಯನ್ನು (ಎಪ್ಪಿಓ) ನಬಾರ್ಡ್ ಯೋಜನೆಯಡಿ ಮಾಡಿಕೊಂಡಿದ್ದಾರೆ. ಇದಕ್ಕೆ ತಾಂತ್ರಿಕತೆ ಯಂತ್ರ ಕೆ.ವಿ.ಕೆ ನೀಡಿದೆ. ಆದರೆ ಗ್ರಾಮ ಪಂಚಾಯಿತಿ ಸೂಕ್ತ ಜಾಗ ಒದಗಿಸಿ ಕೊಡಬೇಕಿದೆ.
ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಡಿ.ನಾಗೇನಹಳ್ಳಿ ಮತ್ತು ತಂಗನಹಳ್ಳಿಯ ಒಣ ಭೂಮಿ ಬೇಸಾಯ ಅಭಿವೃದ್ಧಿಯ ಯಶಸ್ಸಿಗೆ ಕೃಷಿ ವಿಜ್ಞಾನ ಕೇಂದ್ರ, ಹಿರೇಹಳ್ಳಿ ಮತ್ತು ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಜಂಟಿಯಾಗಿ ಉತ್ತಮ ಪಂಚಾಯತ್ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ ನಿಕ್ರಾ ಕೃಷಿಗೆ ಪ್ರಶಸ್ತಿ ಪಡೆದ ಮೊದಲ ಗ್ರಾ.ಪಂ ಇದಾಗಿದೆ. ಈ ಯೋಜನೆ ಬಯಲು ಸೀಮೆಯ ಕೃಷಿಕರಿಗೆ ಅತ್ಯಂತ ಆಶಾದಾಯಕವಾಗಿದ್ದು ಪ್ರಶಸ್ತಿ ಮತಷ್ಟು ಹುರುಪು ನೀಡಿದೆ.
ಹಿರೇಹಳ್ಳಿಯ ಕೆ.ವಿ.ಕೆ., ಎಲೆರಾಂಪುರ ಗ್ರಾಮ ಪಂಚಾಯಿತಿ ಮತ್ತು ರೈತರ ಶ್ರಮಕ್ಕೆ ಕೇಂದ್ರ ಸರ್ಕಾರದ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದ್ದು, ಎಲ್ಲರನ್ನು ಅಭಿನಂದಿಸುತ್ತೇನೆ. ಕ್ಷೇತ್ರದ ಎಲ್ಲಾ ಭಾಗಗಳಲ್ಲು ಈ ಯೋಜನೆಯನ್ನು ಜಾರಿಗೊಳಿಸಿ ರೈತರ ಏಳಿಗೆಗೆ ಶ್ರಮಿಸಲಾಗುವುದು.
-ಡಾ.ಜಿ.ಪರಮೇಶ್ವರ, ಶಾಸಕ.
ಈ ಯೊಜನೆಗೆ ನಮ್ಮ ವಿಜ್ಞಾನಿಗಳು, ಅಧಿಕಾರಿಗಳು ರೈತರ ಸಹಕಾರದೊಂದಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಯೋಜನೆ ಸಾಕಾರವಾಗಿದೆ. ಪ್ರಶಸ್ತಿಗೆ ಕಾರಣರಾದ ಎಲ್ಲ್ಲರಿಗೂ ಧನ್ಯವಾದಗಳು.
-ಲೋಗಾನಂದನ್, ಕೆ.ವಿ.ಕೆ ಹಿರೇಹಳ್ಳಿಯ ಆಡಳಿತಾಧಿಕಾರಿ.
ನಿಕ್ರಾ ಯೋಜನೆ ಅನುಷ್ಠಾನ ಅಭಿವೃದ್ಧಿಗೆ ವಿಜ್ಞಾನಿಗಳೊಂದಿಗೆ ನಮ್ಮ ರೈತರ ಸಹಕಾರ ಆಸಕ್ತಿ ಸಾಕಷ್ಟಿದ್ದು ಪ್ರಶಸ್ತಿ ನಮ್ಮ ತಾಲ್ಲೂಕಿಗೆ ಗೌರವ ತಂದಿದೆ.
-ನಾಗರಾಜು, ಸಹಾಯಕ ಕೃಷಿ ನಿರ್ದೇಶಕ.
ಈ ಯೋಜನೆಯಲ್ಲಿ ಎಲ್ಲಾ ಜಮೀನಿನಲ್ಲಿ ಮಣ್ಣು ಪರೀಕ್ಷಿಸಿ ಕೃಷಿಗೆ ಆದ್ಯತೆ ನೀಡಲಾಗಿದೆ. ಕಡಿಮೆ ನೀರು ಬಳಕೆಯ ಬೆಳೆಗೆ ಆದ್ಯತೆ ನೀಡಲಾಗಿದೆ.
_ರಮೇಶ್, ಮಣ್ಣು ವಿಷಯತಜ್ಞ ವಿಜ್ಞಾನಿ.
ನಿಕ್ರಾ ಯೋಜನೆಗೆ ಎಲೆರಾಂಪುರ ಗ್ರಾಮ ಪಂಚಾಯಿತಿ ನೀಡಿದ ಸಹಕಾರಕ್ಕೆ ಬಂದಿರುವ ಪ್ರಶಸ್ತಿ ನಮ್ಮ ಇಲಾಖೆಗೆ ಮತ್ತÀಷ್ಟು ಹುರುಪು ನೀಡಿದಂತಾಗಿದೆ.
-ದೊಡ್ಡಸಿದ್ದಪ್ಪ, ತಾ.ಪಂ.ಕಾರ್ಯ ನಿರ್ವಾಹಣಾಧಿಕಾರಿ.
– ರಂಗಧಾಮಯ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
