ಭದ್ರಾವತಿ : ಮಾಸ್ಕ್ ಹಾಕಲು ಹೇಳಿದ ನಗರಸಭೆ ಗುತ್ತಿಗೆ ನೌಕರನ ಕೊಲೆ!!

ಭದ್ರಾವತಿ:

 

     ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರನೋರ್ವನನ್ನು ಇರಿದು ಹತ್ಯೆ ಮಾಡಲಾಗಿರುವ ಘಟನೆ ನಗರದಲ್ಲಿ ನಡೆದಿದೆ.

      ಸುನಿಲ್ (24) ನಗರಸಭೆ ಗುತ್ತಿಗೆ ನೌಕರ.

     ಸುನಿಲ್ ಹಾಗೂ ಮತ್ತೊಬ್ಬ ಸಹೋದ್ಯೋಗಿ ಶ್ರೀ ಕಂಠ ಮಂಗಳವಾರ ಸಂಜೆ ಜತೆಯಾಗಿ ಅನ್ವರ್ ಕಾಲೋನಿ ಕಡೆಗೆ ತೆರಳಿದ್ದ ವೇಳೆ ನಿಂತಿದ್ದ ಯುವಕರಿಗೆ ಮಾಸ್ಕ್ ಹಾಕಲು ಹೇಳಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ಮಾತುಕತೆಯಾದ ವೇಳೆ ಗುಂಪಿನಲ್ಲಿದ್ದ ಕೆಲವರು ಇವರ ಮೇಲೆ ಹಲ್ಲೆ ನಡೆಸಿ ಮಾರಾಕಾಸ್ತ್ರದಿಂದ ಇರಿದಿದ್ದಾರೆ.

     ಇರಿತಕ್ಕೊಳಗಾದ ಇವರನ್ನು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮೃತಪಟ್ಟಿದ್ದಾನೆ.  ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap