ಮುಂಬೈ:
ದೇಶದಲ್ಲಿಯೇ ಬೃಹತ್ ವಿದ್ಯುತ್ ಚಾಲಿತ ವಾಹನಗಳ ಅಗ್ನಿದುರಂತ ಎನ್ನುವಂತೆ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಎಲೆಕ್ಟ್ರಿಕ್ ಬೈಕ್ ಹೊತ್ತು ಹೊರಟಿದ್ದ ಕಂಟೇನರ್ ಬೆಂಕಿಗೆ ಆಹುತಿಯಾಗಿ 20ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್ ಗಳು ಭಸ್ಮಗೊಂಡಿರುವ ಘಟನೆ ನಡೆದಿದೆ.
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹೆಚ್ಚಳವಾಗುತ್ತಿರುವ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸುರಕ್ಷತೆ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಯಾಕೆಂದ್ರೇ, ಅಲ್ಲಲ್ಲಿ ಎಲೆಕ್ಟ್ರಿಕ್ ಬೈಕ್ ಗಳು ದಿಢೀರ್ ಬೆಂಕಿಗೆ ಆಹುತಿಯಾಗುತ್ತಿರೋದೆ ಕಾರಣವಾಗಿದೆ.
ಮನೆ ಕಟ್ಟೋರಿಗೆ ಬಿಗ್ ಶಾಕ್ : ಕಬ್ಬಿಣ, ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆ!
ಇದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಜಿತೇಂದ್ರ ಎಲೆಕ್ಟ್ರಿಕ್ ವಹಿಕಲ್ಸ್ ಫ್ಯಾಕ್ಟರಿಯಿಂದ 40 ಎಲೆಕ್ಟ್ರಿಕ್ ಬೈಕ್ ಗಳನ್ನು ಹೊತ್ತ ಕಂಟೇನರ್, ಬೆಂಗಳೂರಿನತ್ತ ಪ್ರಯಾಣ ಆರಂಭಿಸಿತ್ತು. ಹೀಗೆ ಹೊರಟ ಕೆಲವೇ ಕ್ಷಣದಲ್ಲಿ ಕಂಟೈನರ್ ಒಳಗಡೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, 20 ಬೈಕ್ ಗಳು ಸುಟ್ಟು ಭಸ್ಮವಾಗಿರೋದಾಗಿ ಕಂಪನಿ ತಿಳಿಸಿದೆ.
ಇನ್ನೂ ಕಂಟೇನರ್ ನಲ್ಲಿನ ಮೇಲಿನ ಸಾಲಿನಲ್ಲಿದ್ದಂತ ಬೈಕ್ ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಈ ದುರಂತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿರೋದಾಗಿ ತಿಳಿದು ಬಂದಿದೆ.
ಇಂದು ‘SSLC ಪರೀಕ್ಷೆ’ಯ ಕೀ ಉತ್ತರ ಪ್ರಕಟ: ವೀಕ್ಷಿಸಲು ಈ ವಿಧಾನ ಅನುಸರಿಸಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/04/Capture-131.jpg)