ತುಮಕೂರು
ಕರ್ನಾಟಕ ದಲ್ಲಿ ಪ್ರಗತಿಯ ಸ್ಥಿರತೆಗಾಗಿ ಬಿಜೆಪಿ ಸರಕಾರ ಮರಳಿ ಅಧಿಕಾರ ಕ್ಕೆ ತರುವುದು ಅವಶ್ಯವಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.
ಅವರು ಜಿಲ್ಲಾ ಬಿಜೆಪಿ ಯಿಂದ ತುಮಕೂರಿನ ಶ್ರೀ ದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಣಾಳಿಕೆ ಅಭಿಯಾನ ಉದ್ದೇಶಿಸಿ ಮಾತನಾಡಿದರು.
2014ಕ್ಕೂ ಮುಂಚೆ ದೇಶ ಅರಾಜಕತೆ, ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಭಿವೃದ್ಧಿಯ ಹೊಸ ಮೈಲಿಗಲ್ಲೇ ಸ್ಥಾಪನೆಯಾಗಿದ್ಜು, ಜಿ20ಅಧ್ಯಕ್ಷತೆಯ ಗೌರವ ಸ್ಥಾನ ದ ಮೂಲಕ ಭಾರತ ವಿಶ್ವ ಗುರುವೆನಿಸಿಕೊಳ್ಳುವಂತಾಗಿದೆ ಎಂದರು.
ಇದೇ ವೇಳೆ ವಕೀಲರು, ವೈದ್ಯರು ಪತ್ರಕರ್ತರು, ನಿವೃತ್ತರೊಂದಿಗೂ ಸಂವಾದ ನಡೆಸಿದ ಸಚಿವೆ ಲೇಖಿ ಅವರು,ಬಿಜೆಪಿ ಭ್ರಷ್ಟಾಚಾರ ವನ್ನು ಸಹಿಸುವ ಪ್ರಶ್ನೆ ಇಲ್ಲ. ಇತ್ತೀಚಿನ ಎಂಎಲ್ಎ ಪ್ರಕರಣ ದಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜನರಿಂದ ಸಲಹೆ ಅಭಿಪ್ರಾಯ ಸ್ವೀಕರಿಸಿ ಉತ್ತಮ ಆಡಳಿತ ನೀಡಲು ಈ ಪ್ರಣಾಳಿಕೆ ಸಲಹಾ ಅಭಿಯಾನ ನಡೆಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್, ಶಾಸಕ ಜಿ. ಬಿ. ಜ್ಯೋತಿಗಣೇಶ್, ಪ್ರಣಾಳಿಕೆ ಸಲಹಾ ಅಭಿಯಾನದ ಕೋ ಆರ್ಡಿನೇಟರ್ ಡಾ. ಪ್ರಕಾಶ್, ಮಹಿಳಾ ಮೋರ್ಚಾ ಜಿಲ್ಲಾ ಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್ ಇತರರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/DSC_2158.jpg)