ರೋಗನಿರೋದಕ ಶಕ್ತಿ ಬರಲು ರಕ್ತದಾನ ಬಹುಮುಖ್ಯ

ಹರಪನಹಳ್ಳಿ:

        ರೋಗನಿರೋದಕ ಶಕ್ತಿ ಬರಲು ರಕ್ತದಾನ ಬಹುಮುಖ್ಯವಾಗಿದೆ, ರಕ್ತ ಕೊಡುವುದರಿಂದ ಬೇರೆ ರೋಗಗಳು ಬರಬಹುದು ಎಂಬ ಮೂಡನಂಬಿಕೆಗಳಿವೆ. ರಕ್ತ ನೀಡುವ ದಾನಿಗಳಿಗೆ ಯಾವುದೇ ರೀತಿ ರೋಗಗಳು ಹರಡುವುದಿಲ್ಲ ಆ ರೀತಿಯ ನಂಬಿಕೆಗಳಿಂದ ಹೊರಬಂದು ರಕ್ತದಾನಕ್ಕೆ ಮುಂದಾಗಿ ಎಂದು ದಾವಣಗೆರೆ ಎಸ್‍ಎಸ್‍ವೈದ್ಯಕೀಯ ಸಂಶೋಧನ ಕೇಂದ್ರದ ಸಹಾಯಕ ಪ್ರಾಧ್ಯಾಪಕ್ಷ ಡಾ.ನಂದೀಶ ಅಭಿಪ್ರಾಯಪಟ್ಟರು.

        ಪಟ್ಟಣದ ಹೆಚ್.ಪಿ.ಎಸ್.ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತರಳಬಾಳು ವಿದ್ಯಾಸಂಸ್ಥೆಯ ಎಸ್‍ಟಿಜೆ ಪಾಲಿಟೆಕ್ನಿಕ್, ಹೆಚ್‍ಪಿಎಸ್, ಎನ್‍ಎಸ್‍ಎಸ್ ಘಟಕ, ಇಂಡಿಯನ್ ರೆಡ್‍ಕ್ರಾಸ್ ಸೋಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಪ್ರಯುಕ್ತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

        ಮಹಿಳೆಯರು ಕೂಡ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ಹೊಸದಾದ ರಕ್ತ ಉತ್ಪತ್ತಿಯಾಗುತ್ತದೆ ಇದರಿಂದ ದೇಹ ಚಟುವಟಿಕೆಯಿಂದ ಕೂಡಿರುತ್ತದೆ. ಅನುಕೂಲವಾಗುತ್ತದೆ ವಿನಹಃ ಯಾವುದೇ ತೊಂಧರೆ ಇರುವುದಿಲ್ಲ, ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವ ಉಳಿಸಲು ಮುಂದಾಗಿ ಎಂದು ಹೇಳಿದರು.

        ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ವೈದ್ಯ . ರಮೇಶ್ ಮಾತನಾಡಿ ರಕ್ತದಾನ ಮಾಡುವುದರಿಂದ ಬೇರೆಯವರಿಗೆ ಲಾಭವಾಗುವುದಿಲ್ಲ ಹೆಚ್ಚು ಲಾಭ ಇರುವುದು ನಮಗೆ, ರಕ್ತದಾನ ಮಾಡುವುದರಿಂದ ಇದರಿಂದ ಮಾನವೀಯತೆ ಮೇರೆಯಬಹುದು. ರಕ್ತ ಕೊಟ್ಟಾಗ ದೇಹದ ಚಟುವಟಿಕೆ ಕ್ರೀಯಾಶೀಲವಾಗುತ್ತದೆ ಎಲ್ಲರೂ ಜನ್ಮದಿನದ ಸಂದರ್ಭಧಲ್ಲಿ ತಾಯಿಗೆ ನಮಸ್ಕಾರ ಮಾಡಿ ಹತ್ತಿರದ ಬ್ಲಡ್ ಬ್ಯಾಂಕುಗಳಿಗೆ ಹೋಗಿ ರಕ್ತದಾನ ಮಾಡಿ ಇದಕ್ಕಿಂತ ಇನ್ನೊಂದು ಹುಟ್ಟುಹಬ್ಬ ಆಚರಣೆ ಬೇಕಾಗಿಲ್ಲ ಎಂದು ಹೇಳಿದರು.

       ಎಚ್‍ಪಿಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಬಸವಂತಪ್ಪ, ಎಸ್‍ಟಿಜೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಯುಜಿ.ಶರಣಪ್ಪ , ಪಿಯು ಕಾಲೇಜು ಪ್ರಾಚಾರ್ಯ ನೀಲಮ್ಮ ಮಾತನಾಡಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್‍ಪಿಎಸ್‍ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಕೀಲ ಸಿದ್ದಪ್ಪ ವಹಿಸಿದ್ದರು.ಈ ವೇಳೆ ಉಪನ್ಯಾಸಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 70 ಜನ ರಕ್ತದಾನ ಮಾಡಿದರು.ಉಪನ್ಯಾಸಕರಾದ ರಾಜಪ್ಪ ಎ., ಮಂಜುನಾಥ ಮಾಳ್ಗಿ, ಪ್ರದೀಪ ಡಿ.ಸಿ, ಸೇರಿದಂತೆ ಮತ್ತಿತರರು ಇದ್ದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link