ಬೆಂಗಳೂರು :
ವಿಕೇಂಡ್ ಕರ್ಫ್ಯೂನಲ್ಲೂ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳ ಓಡಾಟ ನಡೆಸಲಿವೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಪಕ ರಾಜೇಶ್ ತಿಳಿಸಿದ್ದಾರೆ.
ಇಂದು ಸಂಜೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದ್ದು, ಜನರ ಅನುಕೂಲಕ್ಕಾಗಿ ವಿಕೇಂಡ್ ಕರ್ಫ್ಯೂನಲ್ಲೂ ಬಿಎಂಟಿಸಿ ಬಸ್ ಓಡಾಟ ನಡೆಸಲಿದ್ದು, ನಾಳೆಯಿಂದಲೇ ಬಸ್ಗಳ ಸಂಚಾರಿಸಲಿವೆ. ಅದರಂತೆ, ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಬಸ್ಗಳು ಓಡಾಡಲಿವೆ.
ಆದ್ರೆ ವೀಕೆಂಡ್ ವೇಳೆ ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಳಲಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ. 4000 ಸಾರಿಗೆಗಳಲ್ಲಿ ಶೇ.30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಕಾರ್ಯಚರಣೆಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
