ಬೆಂಗಳೂರು
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ತಿಳಿಗೊಳಿಸಲು ಪ್ರಾರಂಭವಾದ ಬಿಎಂಟಿಸಿ ಇತ್ತೀಚೆಗೆ ಜನಸ್ನೇಹಿಯಾಗುವ ಯತ್ನ ಹಾಗು ಪ್ರಕೃತಿ ಮೇಲಿರುವ ಕಾಳಜಿಗಾಗಿ ಆರಂಭಿಸುತ್ತಿರುವ ಹೊಸ ಸೇವೆಯೇ ಮೆಥೆನಾಲ್ ಬಸ್ ಈ ಬಸ್ಸು ಪ್ರಕೃತಿ ಸಂರಕ್ಷಣೆ ಓಡಾಡಬಹದು. ಮಾರ್ಚ್ 12 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿನ ಮೊದಲ ಮೆಥೆನಾಲ್ ಬಸ್ಗಳನ್ನು ಅನಾವರಣಗೊಳಿಸಲಿದ್ದಾರೆ.
ಎಂಡಿ15 (15 ಪ್ರತಿಶತ ಮೆಥೆನಾಲ್ ಹೊಂದಿರುವ ಡೀಸೆಲ್) ಬಸ್ಗಳ ಪ್ರಾಯೋಗಿಕ ಸಂಚಾರವನ್ನು ಸಂಜೆ 6 ಗಂಟೆಗೆ ವಿಧಾನಸೌಧದಿಂದ ಪ್ರಾರಂಭಿಸಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಸ್ಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ವಿ.ಸೂರ್ಯ ಸೇನ ತಿಳಿಸಿದ್ದಾರೆ.
ನೀತಿ ಆಯೋಗ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಅಶೋಕ್ ಲೇಲ್ಯಾಂಡ್ ಜೊತೆಗೆ ಬಿಎಂಟಿಸಿ ಈ ಯೋಜನೆಯನ್ನು ನಡೆಸುತ್ತಿದೆ. ಬಸ್ಗಳು ಹೊರ ಉಗುಳುವ ಮಾಲಿನ್ಯ ಮಟ್ಟದಲ್ಲಿ ಗಣನೀಯ ಇಳಿಕೆಗೆ ಈ ಬಸ್ಗಳು ಕಾರಣವಾಗುವೆ. ಪ್ರಾಯೋಗಿಕ ಯೋಜನೆಗಾಗಿ ಒಟ್ಟು 80 ಮೆಥೆನಾಲ್ ಚಾಲಿತ ಬಸ್ಗಳನ್ನು ಸೇರಿಸಲು ಬಿಎಂಟಿಸಿ ಯೋಜಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
![](https://prajapragathi.com/wp-content/uploads/2023/03/Untitled-2-20.jpg)