ನಾವೂ ಏರ್ ಪೋರ್ಟ್ ಗೆ ಹೋಗುತ್ತಿರುತ್ತೇವೆ. ಏನೋ ನೋಡಬಾರದ್ದನ್ನು ನೋಡಿರುತ್ತೇವೆ. ಎಲ್ಲಾ ಸೂಕ್ಷ್ಮತೆಗಳು ನಮಗೂ ಗೊತ್ತಾಗುತ್ತದೆ. ಹೈದರಾಬಾದ್ ನಲ್ಲಿ ಒಬ್ಬ ವ್ಯಕ್ತಿ ನನಗೆ ಒಬ್ಬ ವ್ಯಕ್ತಿ ಏನೋ ಹೇಳಿದ್ದ. ಅದು ಅಲ್ಲಿಯವರೆಗೆ ಮುಟ್ಟಿದೆ ಎಂದರೆ ಗೆಳೆಯನಾಗಿ ನಾನು ಹೇಳಲೇಬೇಕು. ಅದಕ್ಕೆ ನಾನು ಜ್ಯೋತಿಷ್ಯ ಮೊರೆಯನ್ನೂ ಹೋಗಿದ್ದೆವು. ಜ್ಯೋತಿಷಿಗಳೊಬ್ಬರು ಇವರಿಬ್ಬರ ಜಾತಕದಲ್ಲಿ ಡಿವೋರ್ಸ್ ಅಂತ ಇದೆ ಎಂದಿದ್ದರು. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರೇ ಬೇಕು ಎಂದರೆ ನಾವೇನೂ ಮಾಡಕ್ಕಾಗಲ್ಲ. ಬೆನ್ಜ್ ಹಿಂದೆ ಹೋಗಿರುವವರು ಯಾರು ಎಂದು ಕರ್ನಾಟಕದ ಜನತೆಗೆ ಗೊತ್ತಾಗುತ್ತದೆ. ಒಬ್ಬ ಸಹೋದರನಾಗಿ ನಾನು ಚಂದನ್ ಪರ ಇದ್ದೇನೆ’ ಎಂದು ಪ್ರಶಾಂತ್ ಹೇಳಿದ್ದಾರೆ.
