ಚಿಕ್ಕಮಾಲೂರು ಗ್ರಾಮದಲ್ಲಿ ಪುನಃ ಕರಡಿ ದರ್ಶನ…!

ಬ್ಯಾಲ್ಯ :

     ಸುಮಾರು ಹದಿನೈದು ದಿನಗಳಿಂದ ಕೊಡಿಗೇನಹಳ್ಳಿ ಹೋಬಳಿ ಚಿಕ್ಕ ಮಾಲೂರು ಗ್ರಾಮದ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿದ್ದ ಕರಡಿಗಳು ಮತ್ತೆ ಸೋಮವಾರ ಗ್ರಾಮದ ಹೊರವಲಯದಲ್ಲಿ ಪೆÇದೆಯೊಂದರ ಬಳಿ ನಾಲ್ಕು ಕರಡಿಗಳು ಮಲಗಿರುವುದನ್ನು ದನಗಾಹಿಗಳು ಕಂಡಿದ್ದಾರೆ.

      ಈ ಘಟನೆ ಜನರಲ್ಲಿ ಆತಂಕ ಮತ್ತು ಭಯ ಉಂಟು ಮಾಡಿವೆ. ಮೂರು ದೊಡ್ಡ ಕರಡಿ ಮತ್ತು ಒಂದು ಮರಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆಗ ಕರಡಿಗಳು ಕಂಡು ಬಂದಿಲ್ಲ. ನಮ್ಮ ಮನವಿ ಯನ್ನು ಇಲಾಖೆ ಪರಸ್ಕರಿಸಿಲ್ಲ. ನಾವು ಭಯದಲ್ಲಿ ದಿನಗಳನ್ನು ಕಳೆಯುತ್ತಿದ್ದೇವೆ. ಇಲಾಖೆಯವರು ಆದಷ್ಟು ಬೇಗ ಬೋನುಗಳನ್ನಿಟ್ಟು ಕರಡಿಗಳನ್ನು ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಧುಗಿರಿ ವಲಯಾರಣ್ಯಾಧಿಕಾರಿ ಸಿ.ರವಿ, ಆಹಾರ ಹುಡುಕುತ್ತಾ ಕರಡಿಗಳು ಅತ್ತ ಬಂದಿರಬಹುದು. ಸದ್ಯದಲ್ಲೇ ಬೋನುಗಳನ್ನಿರಿಸಿ ಕರಡಿಗಳನ್ನು ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap