ಮತ್ತೆ ಸಚಿವ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ…..!

ನವದೆಹಲಿ: 

   ಪ್ರಧಾನಿ ನರೇಂದ್ರ ಮೋದಿ  ಅವರು ಇಂದು ಎಲ್ಲಾ ಕೇಂದ್ರ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸುವ ಸಾಧ್ಯತೆಯಿದೆ, ಇದು ಆಪರೇಷನ್ ಸಿಂದೂರದ ನಂತರ ನಡೆಯಲಿರುವ ಮೊದಲ ಸಭೆಯಾಗಿದೆ. ಈ ಅಧಿವೇಶನವು 3-4 ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದೆ ಮತ್ತು ಇದರಲ್ಲಿ ಕ್ಯಾಬಿನೆಟ್ ಸಚಿವರು, ರಾಜ್ಯ ಸಚಿವರು ಭಾಗವಹಿಸಲಿದ್ದಾರೆ. ಸಂಪುಟ ಕಾರ್ಯದರ್ಶಿ, ಇಲಾಖೆ ಕಾರ್ಯದರ್ಶಿಗಳು ಮತ್ತು ಪಿಎಂಒದ ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಸಹ ಹಾಜರಾಗುವ ಸಾಧ್ಯತೆಯಿದೆ.

    ಆಪರೇಷನ್‌ ಸಿಂದೂರ್‌ ಹಾಗೂ ವಿದೇಶಾಂಗ ಇಲಾಖೆಯ ಕ್ರಮಗಳ ಕುರಿತು ಇಂದು ಚರ್ಚೆ ನಡೆಸುವ ಸಾಧ್ಯತೆ ಇದೆ. ಜಲ ಶಕ್ತಿ ಸಚಿವಾಲಯವು ಜಲ ಜೀವನ್ ಮಿಷನ್ ಕುರಿತು ನವೀಕರಣಗಳನ್ನು ಪ್ರಸ್ತುತಪಡಿಸುವ ನಿರೀಕ್ಷೆಯಿದೆ. ಪ್ರಧಾನಿ ಮೋದಿಯವರ ಪ್ರಮುಖ ಭಾಷಣದೊಂದಿಗೆ ಸಭೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಭಾರತದ ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಉತ್ತೇಜಿಸಲು ಮೇ 20 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

   ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದ ಪ್ರವಾಸೋದ್ಯಮ ಸಂಪೂರ್ಣ ಕುಸಿತ ಕಂಡಿತ್ತು. ಇದೀಗ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಭಾರತ ಸರ್ಕಾರವು ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ. ಆಪರೇಷನ್‌ ಸಿಂದೂರದ ಬಳಿಕ ಮೋದಿ ಸೈನಿಕರನ್ನು ಭೇಟಿ ಮಾಡಿ ಉತ್ತೇಜಿಸಿದ್ದಾರೆ. ಆಪರೇಷನ್‌ ಸಿಂದೂರದ ಮೂಲಕ ಕೋಟ್ಯಾಂತರ ಭಾರತೀಯರ ಗೌರವವನ್ನು ನೀವು ಹೆಚ್ಚಿಸಿದ್ದೀರಿ ಎಂದು ಮೋದಿ ಹೇಳಿದರು. ಇಡೀ ದೇಶ ಸೈನಿಕರಿಗೆ ಕೃತ್ಞರಾಗಿದ್ದಾರೆ. ಆಪರೇಷನ್‌ ಸಿಂದೂರದ ಪ್ರತಿಧ್ವನಿ ಇಡೀ ಜಗತ್ತನಲ್ಲಿ ಮೊಳಗುತ್ತಿದೆ ಎಂದು ಮೋದಿ ಹೇಳಿದ್ದಾರೆ. 

   ಭಾರತ್ ಮಾತಾ ಕಿ ಜೈ ಎಂಬುದು ಬರೀ ಘೋಷಣೆ ಅಲ್ಲ. ಅದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿರುವ ಪ್ರತಿಯೊಬ್ಬ ಸೈನಿಕನ ಶಪಥ ಎಂದು ಮೋದಿ ಹೇಳಿದರು. ನೀವೆಲ್ಲರೂ ನಿಮ್ಮ ಗುರಿಯನ್ನು ಪರಿಪೂರ್ಣತೆಯಿಂದ ತಲುಪಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪಾಕಿಸ್ತಾನದಲ್ಲಿ, ಭಯೋತ್ಪಾದಕ ಶಿಬಿರಗಳು ಮತ್ತು ಅವರ ವಾಯುನೆಲೆಗಳು ಮಾತ್ರ ನಾಶವಾಗಲಿಲ್ಲ, ಬದಲಿಗೆ ಅವರ ದುಷ್ಟತನ ಕೂಡ ನಾಶವಾಗಿದೆ. ಉಗ್ರ ಪೋಷಕರಿಗೆ ನಾವು ಸರಿಯಾದ ಪಾಠವನ್ನು ಕಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link