ಹಾಸನ : ಕಾರ್ ಟಯರ್ ಸ್ಫೋಟ : ಮದುವೆಗಾಗಿ ಬರುತ್ತಿದ್ದವ ಸಾವು!!

  ಕುಂದಾಪುರ :  

      ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಕಾರಿನ ಟಯರ್ ಸ್ಪೋಟಗೊಂಡು  ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.

     ಕುಂದಾಪುರದ ಉಳ್ತೂರಿನ ಪ್ರಕಾಶ್ ಶೆಟ್ಟಿ (43) ಮೃತಪಟ್ಟವರು. ನಾಳೆ (ಫೆ.21) ಕುಂದಾಪುದದಲ್ಲಿ ನಡೆಯಲಿರುವ ಸೊಸೆಯ ಮದುವೆ ಸಮಾರಂಭಕ್ಕೆ ಕುಟುಂಬ ಸಮೇತರಾಗಿ ಆಗಮಿಸುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.

      ಘಟನೆಯಲ್ಲಿ ಪ್ರಕಾಶ್ ಶೆಟ್ಟಿಯವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಮಕ್ಕಳಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link