ಬೇನಾಮಿ ಮಳಿಗೆದಾರರ ಪಟ್ಟಿ ಮಾಡಿ,ಕ್ರಮ ಕೈಗೊಳ್ಳಿ : ಮಾದುಸ್ವಾಮಿ

ಹುಳಿಯಾರು:

    ಪಟ್ಟಣದಲ್ಲಿ ಲೈಸನ್ಸ್ ಪಡೆಯದೆ ಅನಧಿಕೃತವಾಗಿ ಮನೆ ಕಟ್ಟುತ್ತಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರೌಂಡ್ ಮತ್ತು ಒಂದನೆ ಮಹಡಿ ಕಟ್ಟಲು ಮಾತ್ರ ಅವಕಾಶವಿದ್ದು, ಮೂರ್ನಾಲ್ಕು ಮಹಡಿ ಮನೆ ಕಟ್ಟುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದು ಇವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಸಚಿವ ಜೆ.ಸಿ. ಮಾಧುಸ್ವಾಮಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

   ಹುಳಿಯಾರು ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ಎನ್.ಕಿರಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಈಗಾಗಲೇ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿರುವಂತೆ ವಿದ್ಯುತ್ ಸಂಪರ್ಕ ಪಡೆಯಲು ಪಟ್ಟಣ ಪಂಚಾಯಿತಿ ಅನುಮತಿ ಬೇಕಿರುವುದಿಲ್ಲ. ಆದರೆ ಅನುಮತಿ ಪಡೆಯದೆ ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ನೋಟಿಸ್ ನೀಡಬೇಕು ಹಾಗೂ ಬೆಸ್ಕಾಂಗೆ ಇಂತಹ ಅನುಮತಿ ಪಡೆಯದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಸೂಚನೆ ನೀಡಬೇಕು ಎಂದರು.

    ಮಾಸಿಕ ಸಭೆಯಲ್ಲಿ ಜೂನ್ 2022 ರಿಂದ ಜನವರಿ 23 ಮಾಹೆ ವರೆಗೆ ಜಮಾ ಖರ್ಚುಗಳನ್ನು ಓದಲಾಯಿತು.15ನೇ ಹಣಕಾಸು ಯೋಜನೆಯ ಅನುದಾನದಲ್ಲಿ 113 ಲಕ್ಷಗಳಿಗೆ ತಯಾರಿಸಲಾಗಿದ್ದ ಕ್ರಿಯ ಯೋಜನೆಗೆ 63 ಲಕ್ಷಗಳಿಗೆ ಮಾತ್ರ ಅನುಮೋದನೆ ದೊರೆತಿದ್ದು ಬಾಕಿ ಉಳಿದ 50 ಲಕ್ಷ ರೂಪಾಯಿಗಳಿಗೆ ತುರ್ತಾಗಿ ಕ್ರಿಯಾಯೋಜನೆ ರೂಪಿಸಲು ಚರ್ಚಿಸಲಾಯಿತು.

    ಕೆಲವೇ ವಾರ್ಡ್ಗಳಿಗೆ ಮಾತ್ರವೇ ಅಭಿವೃದ್ಧಿಕ್ಕೆ ಒತ್ತು ಕೊಡುತ್ತಿದ್ದು ಕೆಲವೊಂದು ವಾರ್ಡ್ಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಸಭೆಯ ಆರಂಭದಲ್ಲಿಯೇ ಸದಸ್ಯರಾದ ಅಬೂಬಕರ್ ಸಿದ್ದೀಕ್,ದಸ್ತಗಿರಿ ಸಾಬ್ ಹಾಗೂ ಮಹಮದ್ ಜುಬೇರ್ ಆರೋಪಿಸಿ ಕಳೆದ ಸಭೆಯಲ್ಲಿ ಮಂಡಿಸಲಾಗಿದ್ದ ಕೆಲವೊಂದು ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ತಕರಾರು ತೆಗೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ಕಳೆದ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿದ್ದನ್ನು ಈ ಸಭೆಯಲ್ಲಿ ಪುನಹ ಚರ್ಚಿಸಲು ಅವಕಾಶವಿಲ್ಲ. ಅಂದು ಅನುಮೋದಿಸಿದ್ದ ನಿರ್ಣಯವನ್ನು ಇಂದು ಸ್ಥಿರೀಕರಿಸಬೆಕಷ್ಟೇ. ಅನಾವಶ್ಯಕ ಚರ್ಚೆ ಹಾಗೂ ವಾದಕ್ಕೆ ಅವಕಾಶ ಬೇಡ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರುಗಳು ನಮ್ಮ ವಾರ್ಡ್ಗಳಲ್ಲೂ ಅಭಿವೃದ್ಧಿಗೆ ಒತ್ತು ನೀಡಬೇಕು.ಇದುವರೆಗೂ ಪಟ್ಟಣದ ಕೆಲವೊಂದು ವಾರ್ಡ್ಗಳಲ್ಲಿ ರಸ್ತೆ ಚರಂಡಿ ಆಗಿಯೇ ಇಲ್ಲ.ಆಗಿರುವ ವಾರ್ಡ್ ಗಳಿಗೆ ರಸ್ತೆ ಮತ್ತೆ ಚರಂಡಿ ಕಾಮಗಾರಿಯನ್ನು ಪುನಹ ಮಾಡುವ ಬದಲು ಚರಂಡಿ ರಸ್ತೆಯೇ ಇಲ್ಲದಿರುವ ವಾರ್ಡ್ಗಳಲ್ಲಿ ಕಾಮಗಾರಿ ನಿರ್ವಹಿಸಿ.ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿಗೆ ಒತ್ತು ನೀಡಿ ನಮ್ಮ ವಾರ್ಡ್ ಗಳಿಗೂ ಸಹ ಆದ್ಯತೆ ಕೊಡಬೇಕೆಂದು ಒತ್ತಾಯಿಸಿದರು.

    ಲೈಸೆನ್ಸ್ ನವೀಕರಿಸುತ್ತಿಲ್ಲ: ಪಟ್ಟಣ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ ವಹಿವಾಟು ಲೈಸೆನ್ಸ್ ನವೀಕರಿಸುತ್ತಿಲ್ಲ,ಇದರಿಂದ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಆದಾಯ ಸೋರಿಕೆಯಾಗುತ್ತಿದೆ ಎಂದು ಸದಸ್ಯ ಬಡಗಿ ರಾಜು, ಜುಬೇರ್ ಗಮನ ಸೆಳೆದರು.ಪಟ್ಟಣದಲ್ಲಿ ಹೊಸದಾಗಿ ಮನೆ ನಿರ್ಮಿಸಲು ಲೈಸೆನ್ಸ್ ತೆಗೆದುಕೊಳ್ಳೋದೇ ಮನೆ ನಿರ್ಮಿಸಲಾಗುತ್ತಿದೆ ಅಲ್ಲದೆ, ಮೂರು ಅಂತಸ್ತು ನಾಲ್ಕು ಅಂತಸ್ತಿನಷ್ಟು ಮನೆ ಕಟ್ಟಲಾಗುತ್ತಿದೆ.ಈ ಬಗ್ಗೆ ಇಂಜಿನಿಯರ್ ಆಗಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಯಾಗಲಿ ತಮಗೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು. ಸಿಬ್ಬಂದಿ ಕೊರತೆ ಇರುವುದರಿಂದ ಸಮಸ್ಯೆಯಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

     ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅನಧಿಕೃತವಾಗಿ ಲೈಸೆನ್ಸ್ ಇಲ್ಲದೆ ಮನೆ ಕಟ್ಟುವವರಿಗೆ ,ಒಂದಕ್ಕೂ ಹೆಚ್ಚು ಅಂತಸ್ತು ಮನೆ ಕಟ್ಟಿರುವವರಿಗೆ ನೋಟಿಸ್ ನೀಡಿ. ಹಣ ವಸೂಲಾತಿಗೆ ಸಿಬ್ಬಂದಿ ಕೊರತೆ ಎಂದು ಸಬುಬು ಹೇಳುವ ಬದಲು ಔಟ್ ಸೋರ್ಸಿಂಗ್ ಮೂಲಕ ವಸೂಲಾತಿ ಹಾಗೂ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಶುರು ಮಾಡಲು ಸೂಚಿಸಿದರು.

     ಪಟ್ಟಣದಲ್ಲಿ ಬಹುತೇಕ ಕಡೆ ಮನೆ ಮುಂದಿನ ನಿವೇಶನದಲ್ಲಿ ಪೆಟ್ಟಿಗೆ ಅಂಗಡಿ ಇಡುತ್ತಿದ್ದು, ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಆದರೆ ಪಂಚಾಯಿತಿ ಖಾತೆಯಲ್ಲಿ ಖಾಲಿನಿವೇಶನ ಎಂದೇ ನಮೂದಾಗಿದ್ದು ಇದರಿಂದ ಪಂಚಾಯಿತಿಗೆ ಲುಕ್ಸಾನಾಗುತ್ತಿದೆ, ಈ ಬಗ್ಗೆ ಗಮನಹರಿಸಬೇಕು ಎಂದು ಸಿದ್ದಿಕ್ ಒತ್ತಾಯಿಸಿದರು.

     ಡಾ||ರಾಜಕುಮಾರ್ ರಸ್ತೆಯಲ್ಲಿ 30- 40 ಅಡಿಯಸ್ಟು ರಸ್ತೆ ಒತ್ತುವರಿಯಾಗಿದ್ದು, ಇಂದಿಗೂ ಪಹಣಿಯಲ್ಲಿ ಗೋಮಾಳ ಎಂದೇ ನಮೂದಾಗುತ್ತಿದೆ.ಈ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಒತ್ತುವರಿ ತೆರವು ಮಾಡಿಸುವಂತೆ ಒತ್ತಾಯಿಸಿದರು.

    ಹೊಗೆಯಿಂದ ಸಾಕಷ್ಟು ಸಮಸ್ಯೆ: ಲಿಂಗಪ್ಪನ ಪಾಳ್ಯಕ್ಕೆ ಹೋಗುವ ದಾರಿಯಲ್ಲಿ ಮುಕ್ತಿಧಾಮದ ಬಳಿ ಸಂಗ್ರಸಿಸಲಾಗುತ್ತಿರುವ ತ್ಯಾಜ್ಯ ಸುರಿಯುತ್ತಿದ್ದು, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲೇ ಬೆಂಕಿ ಹಾಕುತ್ತಿರುವುದರಿಂದ,ಬರುವ ಹೊಗೆಯಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಇದರ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಹತ್ತನೇ ವಾರ್ಡಿನ ಸದಸ್ಯೆ ಕಾವ್ಯ ರಾಣಿ ಒತ್ತಾಯಿಸಿದರು.

    ವಳಗೆರೆಹಳ್ಳಿಯ ಚಂದ್ರಶೇಖರ್ ರಾವ್ ಸ್ಥಾಯಿ ಸಮಿತಿ ರಚಿಸುವಂತೆ ಕೋರಿದರು. ಪ್ರತಿ ಸಭೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ತಿಳಿಸಿ, ಆಗ ನಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಪ್ರಶ್ನಿಸಲು ಅನುಕೂಲವಾಗುತ್ತದೆ ಎಂದರು

    7ನೇ ವಾರ್ಡಿನ ಸದಸ್ಯ ಹೇಮಂತ್ ಮಾತನಾಡಿ ಹುಳಿಯಾರು ಪಟ್ಟಣ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 107ರಲ್ಲಿ 5 ಎಕರೆ ಜಾಗ ಖಾಲಿಯಿದ್ದು,ಸೇಂದಿವನ ಎಂದು ನಮೂದಾಗಿದ್ದು ಸದರಿ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಾಗೂ ಸ್ಮಶಾನಕ್ಕೆ ಜಾಗ ಕಾಯ್ದಿರಿಸಿ ಎಂದರು.

    ಸಭೆಯಲ್ಲಿ ಚರ್ಚಿತವಾದ ಹಲವಾರು ವಿಚಾರಗಳಿಗೆ ಸಚಿವರು ಪ್ರತಿಕ್ರಿಯಿಸಿ ಮೊದಲಿಗೆ ನಿವೇಶನ ರಹಿತರ ಪಟ್ಟಿ ತಯಾರು ಮಾಡಿ.ತಹಸಿಲ್ದಾರ್ ಅವರೊಂದಿಗೆ ಮಾತನಾಡಿ ನಿವೇಶನ ನೀಡಲು ಕ್ರಮ ಕೈಗೊಳ್ಳೊಣ. ಪಂಚಾಯತಿ ಮಳಿಗೆಗೆ ಸಂಬAಧಿಸಿದAತೆ ಮೂಲ ಮಳಿಗೆದಾರರ ಹಾಗೂ ಬೇನಾಮಿ ಮಳಿಗೆದಾರರ ಪಟ್ಟಿ ಮಾಡಿ, ಮಳಿಗೆ ಪರಭಾರೆ ಮಾಡಿದ್ದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಉ ಸೂಚಿಸಿದರು.

    ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಿAದ ರಾಮ ಗೋಪಾಲ್ ಸರ್ಕಲ್ ವರೆಗೆ ಸಿಸಿ ಚರಂಡಿ ನಿರ್ಮಾಣ, ವಾಸವಿ ಶಾಲೆ ಮುಂಭಾಗದಲ್ಲಿ ಕೊರೆದಿರುವ ಬೋರ್ವೆಲ್ ಗೆ ಹೊಸದಾಗಿ ಪಂಪು,ಮೋಟಾರ್,ಸ್ಟಾರ್ಟರ್,ಕೇಬಲ್ ಅಳವಡಿಸಲು ಒಪ್ಪಿಗೆ ನೀಡಲಾಯಿತು.

    ಸಭೆಯಲ್ಲಿ ಅಧ್ಯಕ್ಷ ಕಿರಣ್ ಕುಮಾರ್,ಉಪಾಧ್ಯಕ್ಷೆ ಶ್ರುತಿಸನತ್,ಸದಸ್ಯರುಗಳಾದ ಬಿಬಿ ಫಾತಿಮಾ,ದಸ್ತಗಿರಿ ಸಾಬ್,ಸಿದ್ದಿಕ್,ರತ್ನಮ್ಮ,ಗಂಗಾಧರಯ್ಯ,ಹೇಮಂತ ಕುಮಾರ್,ಚಂದ್ರಶೇಖರ್ ರಾವ್,ಮಹ್ಮದ್ ಜುಬೇರ್,ಕಾವ್ಯಾರಾಣಿ, ಸಂಧ್ಯಾ ಕಿರಣ್, ಸೈಯದ್ ಜಹೀರ್,ಪ್ರೀತಿ ರಾಘವೇಂದ್ರ,ಗೀತಾ ಬಾಬು, ದಾಸಪ್ಪ, ಪುಟ್ಟರಾಜು,ಮುಖ್ಯಾಧಿಕಾರಿ ಭೂತಪ್ಪ,ಇಂಜಿನೀಯರ್ ಮಂಜುನಾಥ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap