ಕೆ.ಸಿ.ಆರ್‌ ಪುತ್ರಿಗೆ ಸಿಬಿಐ ಶಾಕ್…!

ನವದೆಹಲಿ

         ಪಕ್ಕದ ರಾಜ್ಯ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್  ಪುತ್ರಿ ಕೆ. ಕವಿತಾ‌ ಅವರಿಗೆ ಸಿಬಿಐ ದೊಡ್ಡ ಶಾಕ್‌ ನೀಡಿದೆ. ಕವಿತಾ ಅವರ ಆಡಿಟರ್ ಆಗಿ ಕೆಲಸ ಮಾಡಿದ್ದ ಬುಚ್ಚಿಬಾಬು ಅವರ ಬಂಧನವಾಗಿದೆ. ದೆಹಲಿ ಅಬಕಾರಿ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಈ ಬಂಧನ ಮಾಡಿದ್ದೇವೆ ಎಂದು ಸಿಬಿಐ ತಿಳಿಸಿದೆ.

       ದೆಹಲಿ ಅಬಕಾರಿ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಕೆ. ಕವಿತಾ ಸಹ ಆರೋಪಿಯಾಗಿದ್ದಾರೆ. ಹೈದರಾಬಾದ್ ಮೂಲದ ಬುಚ್ಚಿಬಾಬು ಗೋರಂಟ್ಲಾ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಮುಖ ಪಾತ್ರ ಇದೆ ಎಂದು ಸಿಬಿಐ ತಿಳಿಸಿದೆ. ಈ ಹಿಂದೆ ಅವರು ವಿಚಾರಣೆಗೆ ಸಹಕರಿಸದ ಕಾರಣವನ್ನು ಉಲ್ಲೇಸಲಾಗಿದೆ. 2021-22ರ ದೆಹಲಿ ಅಬಕಾರಿ ನೀತಿಯ ಅಡಿ, ಅಕ್ರಮವಾಗಿ ಲೈಸೆನ್ಸ್ ಮತ್ತು ಮಾರಾಟದಲ್ಲಿ ಹೆಚ್ಚಿನ ಲಾಭವನ್ನು ದೊರಕಿಸಿ ಕೊಡಲಾಗಿದೆ ಎಂಬ ಆರೋಪವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap