ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಸಿಡಿ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು, ಪ್ರಕರಣದ ಹಿಂದೆ ಡಿ.ಸಿಎಂ ಶಿವಕುಮಾರ್ ಅವರ ಕೈವಾಡವಿದ್ದು ಇದನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಶಾಸಕ ರಮೇಶ್ ಜಾರಕಿ ಹೊಳಿ ಫ್ಯಾಕ್ಸ್ ಮೂಲಕ ಅವರು ಸಿಬಿಐ ತನಿಖೆ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಅವರು ಆಗ್ರಹಿಸಿದ್ದಾರೆ.
ಪ್ಯಾಕ್ಸ್ ಮೂಲಕ ಪತ್ರ ರವಾನಿಸಿರುವ ರಮೇಶ್ ಜಾರಕಿಹೊಳಿ, ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ದಾವೆ ನ.0021/2021 ದಿ.13-3-2021 ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸಿಡಿ ಕೇಸ್ ಹಿಂದೆ ಹಿಂದೆ ಪ್ರಭಾವಿ ನಾಯಕರ ಕೈವಾಡವಿದ್ದು, ಅದನ್ನ ಪತ್ತೆ ಹಚ್ಚಲು ಸಿಬಿಐ ಮುಖಾಂತರ ಮಾತ್ರ ಸಾಧ್ಯ. ಆದ್ದರಿಂದ ಸದರೀ ದಾವೆಯನ್ನು ಕೂಡಲೇ ಸಿಬಿಐಗೆ ವಹಿಸಲು ವಿನಂತಿಸುತ್ತೇನೆ ಅಂತ ಅವರುಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
