ಚೇಳೂರು :
ಭದ್ರಾವತಿಯ ಗೊಂದಿ ಗ್ರಾಮದ ಸಾಧಕಾಶ್ರಮ ಮಠದ ಶ್ರೀ ನಾಮದೇವಾನಂದ ಭಾರತಿ ಸ್ವಾಮಿಜೀ 74 ಹುಬ್ಬಳ್ಳಿಯ ಹಿಗುಲಾಂಬಿಕ ದೇವಸ್ಥಾನದ ಕಳಸ ಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರವಚನ ಮಾಡುವಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಿ ಕೊಂಡಿದ್ದು ತಕ್ಷಣ ಅಲ್ಲಿನ ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಿಸಲಾಯಿತು. ಚಿಕೆತ್ಸೆ ಪಲಕಾರಿಯಾಗದೆ ಭಾನುವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ನಿಧನರಾದರು.
ಇವರು ತಮ್ಮ 40 ನೇ ವಯಸ್ಸಿನಲ್ಲಿ ಕಿಟ್ಟದಾಳನಿನ್ನ ಸಿದ್ದರೂಢ ಮಠದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡರು.
ಮುಂದೆ ಭಾವಸಾರಕ್ಷೆತ್ರಿಯ ಸಮಾಜದ ಗುರುಗಳಾಗಿ ಕರ್ನಾಟಕದ್ಯಾಂತ ಪಂಡರಿ ಸಂಪ್ರಾದಯದ ಭಜನೆ ಕೀರ್ತನೆಗಳೊಂದಿಗೆ ದಿಂಡಿ ಉತ್ಸವ ಕಾರ್ಯಕ್ರಮ ನೆಡೆಸಿ ಭಕ್ತಿ ಬಾವನೆಗಳೊಂದಿಗೆ ಸಮಾಜವನ್ನು ಬೆಳೆಸಲು ಸಹಕಾರಿಯಾಗಿದರು.
ಅಷಾಡ ಮಾಸದಲ್ಲಿ ಪಂಡರಾಪುರಕ್ಕೆ ಭಕ್ತರೊಂದಿಗೆ ಪಾದಯಾತ್ರೆ ಕಾರ್ಯಕ್ರಮ ನೆಡೆಸವುದೊಂದಿಗೆ 21 ವರ್ಷ ತಿರುಪತಿಯ ಪಾದಯಾತ್ರೆಯನ್ನು ಸಹ ಇವರ ನೇತೃತ್ವದಲ್ಲಿ ನೆಡೆಸಿದರು. ಇವರ ಅಂತ್ಯೆಕ್ರಿಯೆ ಗೊಂದಿಗ್ರಾಮ ಮಠದ ಆವರಣದಲ್ಲಿ ತಮ್ಮ ಭಕ್ತ ವೃಂದವರ ಸಮುಖದಲ್ಲಿ ಭಾನುವಾರ ಸಂಜೆಯ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
