ಚೇಳೂರು :
ನಿಟ್ಟೂರು ಹೋಬಳಿ ಮುದ್ದಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಕೊಟ್ಟಿಗೆ ಮನೆ ಬಿದ್ದು ಉಗ್ರಯ್ಯ (60) ಎಂಬ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಚೇಳೂರು ಹೋಬಳಿಯ ಹುಚ್ಚ ರಂಗಪ್ಪನಹಟ್ಟಿ ಗ್ರಾಮದ ಈತ ಸಂಬಂಧಿಕರ ಮನೆಗೆ ಹಬ್ಬಕ್ಕೆಂದು ಮುದ್ದಪುರ ಗೊಲ್ಲರಹಟ್ಟಿಗೆ ಹೋಗಿದ್ದು, ಶನಿವಾರ ಬೆಳಗ್ಗೆ ಸುಮಾರು ಏಳು ಗಂಟೆ ಸಮಯದಲ್ಲಿ ನಾಗರಾಜು ಎಂಬುವವರ ಕೊಟ್ಟಿಗೆ ಮನೆಯ ಪಕ್ಕದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಮಳೆಯಿಂದ ನೆನೆದ ಕೊಟ್ಟಿಗೆ ಮನೆಯ ಗೋಡೆ ಆಕಸ್ಮಿಕವಾಗಿ ಕುಸಿದು ಉಗ್ರಯ್ಯನ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಗುಬ್ಬಿಯ ಸಿಪಿಐ ನದಾಫ್, ಚೇಳೂರು ಪಿಎಸ್ಐ ವಿಜಯಕುಮಾರಿ, ಸಿಬ್ಬಂದಿ ಭೇಟಿ ನೀಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ