ಚೇಳೂರು : ಸೇತುವೆಗೆ ಬಸ್ ಡಿಕ್ಕಿ : 20 ಪ್ರಯಾಣಿಕರಿಗೆ ಪೆಟ್ಟು!

ಚೇಳೂರು : 

     ಗುಬ್ಬಿ ತಾಲ್ಲೂಕು ಚೇಳೂರು ಬಳಿ ಹೂವಿನಕಟ್ಟೆ ಗ್ರಾಮದ ಬಳಿ ಭಾನುವಾರ ಸಂಜೆ ಖಾಸಗಿ ಬಸ್ ಸೇತುವೆಗೆ ಡಿಕ್ಕಿ ಹೊಡೆದು ಉರುಳಿಬಿದ್ದು ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ.

     ತುಮಕೂರಿನಿಂದ ಚೇಳೂರು ಮಾರ್ಗವಾಗಿ ಯರಬಳ್ಳಿಗೆ ಹೋಗುತ್ತಿದ್ದ ಎಸ್‍ಎಲ್‍ವಿಟಿ ಬಸ್ ಸಂಜೆ 7 ಗಂಟೆ ಸುಮಾರಿನಲ್ಲಿ ಚಾಲಕನ ಅಜಾಗರೂಕತೆಯಿಂದ ಹೂವಿನಕಟ್ಟೆ ಗ್ರಾಮದ ಬಳಿಯ ಸೇತುವೆಗೆ ಡಿಕ್ಕಿ ಹೊಡೆದು ಉರುಳಿತು. ಘಟನೆಯಿಂದ ಬಸ್ಸಿನಲ್ಲಿದ್ದ 15-20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್‍ನಲ್ಲಿ ಚೇಳೂರು ಹಾಗೂ ತುಮಕೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.

      ಬಸ್ಸಿನಲ್ಲಿ ಹೋವಿನಕಟ್ಟೆ, ಮಂಚಲದೊರೆ, ಕುಂಟರಾಮನಹಳ್ಳಿ ಸುತ್ತಮುತ್ತಲಿನ ಹಳ್ಳಿಯವರೇ ಹೆಚ್ಚಾಗಿದ್ದರು. ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link