ತುಮಕೂರು: ಅಪ್ತಾಪ್ತೆ ಮದುವೆ ; ಅಧಿಕಾರಿಗಳ ದಾಳಿ!!

 ತುಮಕೂರು :

      ಅಪ್ರಾಪ್ತ ಬಾಲಕಿಯ ಮದುವೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಮದುವೆ ನಿಲ್ಲಿಸಿರುವ ಘಟನೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಗೆ ಸೇರಿದ ಬೈರಾಪುರ ತಾಂಡದಿಂದ ವರದಿಯಾಗಿದೆ.

      15 ವರ್ಷ ಯುವತಿಗೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಬೈರಾಪುರ ತಾಂಡದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಗುರುವಾರ ಮದುವೆ ಮಾಡಲು ಎರಡೂ ಕುಟುಂಬದವರು ಸಿದ್ಧತೆ ನಡೆಸಿದ್ದರು. ಮದುವೆಗೆ 12 ಗಂಟೆಯಷ್ಟೇ ಬಾಕಿ ಇತ್ತು. ಈ ಮಾಹಿತಿ ಆಧರಿಸಿ ತಾಲ್ಲೂಕು ಅಧಿಕಾರಿಗಳು ಮದುವೆ ಮನೆಗೆ ಭೇಟಿ ನೀಡಿ ಅಪ್ತಾಪ್ತೆಯ ಮದುವೆ ನಿಲ್ಲಿಸಿದ್ದಾರೆ.

      ಬಾಲ್ಯ ವಿವಾಹ ಮಾಡುವುದು ಅಪರಾಧ, ಒಂದು ವೇಳೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿದರೆ 1 ಲಕ್ಷ ರೂ. ದಂಡ ಹಾಗೂ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದಂತೆ 2 ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದು ಹೆತ್ತವರಿಗೆ ಕಾನೂನಿನ ಅರಿವು ಮೂಡಿಸಿ ಪೋಷಕರಿಗೆ ನೋಟೀಸ್ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಸಿಡಿಪಿಓ ಅನಿತಾ, ಎಎಸ್‍ಐ ಖಾನ್ ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link