ಹೊಸದುರ್ಗ:
ತಾಲ್ಲೂಕಿನ ಎಲ್ಲಾ ದೇವಾಸ್ಥಾನಗಳು ಅಭಿವೃದ್ದಿ ಪಡಿಸುವುದೇ ನನ್ನ ಗುರಿ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ಅವರು ತಾಲ್ಲೂಕಿನ ಕಪ್ಪಗೆರೆ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 30 ಲಕ್ಷ ವೆಚ್ಚ ವಹಿಸಿ ಆಗುತ್ತಿರುವ ಶ್ರೀ ಲಕ್ಕಮ್ಮ ದೇವಿ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ನಾಡಿನಲ್ಲಿ ದೈವದ ಕೊಡುಗೆ ಅಪಾರ , ದೈವ ಇಲ್ಲವೆಂದರೆ ಈ ಜಗತ್ತಿನಲ್ಲಿ ಏನು ನಡೆಯುವುದಿಲ್ಲ. ತಾಲ್ಲೀಕಿನ ಎಲ್ಲಾ ದೇವಸ್ಥಾನಗಳನ್ನು ಅಭಿವೃದ್ದಿ ಪಡಿಸುತ್ತೇನೆ ಎಂದು ಮಾತನಾಡಿದರು.
ಇದೇ ವೇಳೆ ಪುರಸಭಾ ಸದಸ್ಯ ದೊಡ್ಡಯ್ಯ, ಬಿಜೆಪಿ ಮುಖಂಡ ಬುರೇಡೆಕಟ್ಟೆ ರಾಜೇಶ್, ತಾ. ಬಿಜೆಪಿ ಅಧ್ಯಕ್ಷ ಲಕ್ಮಣಪ್ಪ, ಎಪಿಎಂಸಿ ಮಾರುಕಟ್ಟೆ ನೂತನ ಅಧ್ಯಕ್ಷ ಹೆಚ್.ಸಿ ಮಲ್ಲಿಕಾರ್ಜುನ್, ತುಂಬಿನಕೆರೆ ಬಸವರಾಜು, ಜಿ.ಪಂ. ಮಾಜಿ ಸದಸ್ಯ ಆರ್. ಹನುಂತಪ್ಪ ಇನ್ನು ಉಪಸ್ಥಿತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ