PSI ಹುದ್ದೆ ಹಗರಣದ ಪಿತಾಮಹ ಸಿಎಂ ಬೊಮ್ಮಾಯಿ ಎಂದ ಡಿಕೆಶಿ! ಎಚ್​ಡಿಕೆ ಹೇಳಿದ ಆ ಮೂಲ ಕಿಂಗ್​ಪಿನ್​ ಯಾರು?

ಕುಣಿಗಲ್​: 

ಪಿಎಸ್​ಐ ಎಕ್ಸಾಂ ಅಕ್ರಮ ಪ್ರಕರಣದ ಮೂಲ ಕಿಂಗ್​ಪಿನ್​ನ ಹೆಸರೇಳಿದ್ರೆ ಇಡೀ ಸರ್ಕಾರವೇ ಉರುಳುತ್ತೆ. ಆ ಕಿಂಗ್​ಪಿನ್​ ಭವಿಷ್ಯದ ನಾಯಕ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈ ಮಾತು ಕೇಳಿ ಆ ಕಿಂಗ್​ಪಿನ್​ ಯಾರಿರಬಹುದು?

ಎಂಬ ತರೇಹವಾರಿ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಎಸ್​.ಬೊಮ್ಮಾಯಿ ಅವರೇ ಪಿಎಸ್​ಐ ಹಗಣದ ಪಿತಾಮಹ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪಿಎಸ್​ಐ ಹಗರಣದಲ್ಲಿ ಕಾಂಗ್ರೆಸ್​ನ ಶೇ.70 ನಾಯಕರು ಜೈಲಿಗೆ ಹೊಗಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಆರೋಪಕ್ಕೆ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗದಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯಾಧ್ಯಕ್ಷರು ನಮ್ಮನ್ನು ಜೈಲಿಗೆ ಕಳಿಸುವುದು ಇರಲಿ, ಅವರ ಪಕ್ಷದ ಮುಖಂಡರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ.

ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ ; ಕ್ಷಮೆ ಕೇಳಿದ ಅನುಶ್ರೀ

ಯಾರನ್ನು ಬೇಕಾದರೂ ಜೈಲಿಗೆ ಕಳಿಸಲಿ, ನಮ್ಮ ಅಭ್ಯಂತರವಿಲ್ಲ, ಇದನ್ನು ಏನಾದರೂ ಮಾಡಿ ಕಾಂಗ್ರೆಸ್​ ಕಡೆ ತಿರುಗಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಸಚಿವ ಅಶ್ವತ್ಥನಾರಾಯಣ್​ ಹೆಸರು ಹೊರಗಡೆ ಬಂದಿದೆ, ಗೃಹ ಸಚಿವರ ಕಚೇರಿಯಲ್ಲಿ ಹಗರಣ ನಡೆದಿದೆ, ಅನೇಕ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಇದನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದರು.

ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಮೆಟ್ರೋ ಪಿಲ್ಲರ್ ಗೆ KSRTC ಬಸ್ ಡಿಕ್ಕಿ, ನಾಲ್ವರು ಗಂಭೀರ

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link