ಚಿ.ನಾ.ಹಳ್ಳಿ : ಈಜಲು ಹೋಗಿದ್ದ ಯುವಕ ನೀರುಪಾಲು!!

ಚಿಕ್ಕನಾಯಕನಹಳ್ಳಿ :

     ತಾಲ್ಲೂಕಿನ ಅಂಕಸಂದ್ರದ ಬಳಿ ಇರುವ ಅಣೆಗೆ ಈಜಲು ಹೋದ ದಯಾನಂದ (19) ಎಂಬ ಯುವಕನು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.

      19 ವರ್ಷದ ಈ ಯುವಕ ಹುಳಯಾರು-ಕೆಂಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿದ್ದು, ಹುಳಿಯಾರು ಬಳಿಯ ಎರೇಹಳ್ಳಿ ದೊಡ್ಡನಹಟ್ಟಿಯ ವಾಸಿ ಎನ್ನಲಾಗಿದೆ.

      ತಾಲ್ಲೂಕಿನಲ್ಲಿ ಕಳೆದ 5 ದಿನಗಳಿಂದ ಬಿಡದೆ ಮಳೆಯಾಗುತ್ತಿದ್ದು ಹೇಮಾವತಿ ನಾಲಾ ನೀರಿನ ಜೊತೆಯಲ್ಲಿ ಮಳೆ ನೀರು ಸೇರಿಕೊಂಡು ಅಂಕಸಂದ್ರ ಅಣೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಈಜಲು ಹೋದ ಯುವಕ ದಯಾನಂದನು ನೀರಿನಲ್ಲಿ ಮುಳುಗಿದ್ದಾನೆ. ದಯಾನಂದನ ಶವವನ್ನು ನೀರಿನಿಂದ ಹೊರತೆಗೆಯಲು ಅಗ್ನಿಶಾಮಕ ಇಲಾಖೆಯವರು ಬೋಟ್ ಮೂಲಕ ಸಂಜೆಯವರೆವಿಗೂ ಹುಡುಕುತ್ತಿದ್ದರೂ ಶವ ಇನ್ನೂ ಪತ್ತೆಯಾಗಿರಲಿಲ್ಲ. ಮಳೆ ನೀರು ರಭಸದಿಂದ ಹರಿಯುತ್ತಿದ್ದು ಶವ ಕೊಚ್ಚಿಹೋಗಿರುವ ಅನುಮಾನವಿದೆ. ಈ ಸಂಬಂಧ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap