ಬಿಜೆಪಿ  ವಿರುದ್ಧ ಕಾಂಗ್ರೆಸ್ಸಿನ ಮತ್ತೊಂದು ಅಭಿಯಾನ ಶುರು

ಬೆಂಗಳೂರು

‌      ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆಡಳಿತರೂಢ ಬಿಜೆಪಿ  ವಿರುದ್ಧ ಕಾಂಗ್ರೆಸ್ಸಿನ ಮತ್ತೊಂದು ಅಭಿಯಾನ ಶುರುವಾಗಿದೆ. ಹಲವು ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

     ‘ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ. ಅಮೂಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು. ಕೆ ಎಂ ಏಫ್ ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು. ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು ಸರ್ವನಾಶ ಮಾಡುತ್ತಿದೆ #ಕರ್ನಾಟಕವಿರೋಧಿಬಿಜೆಪಿ’ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

    ‘ಅಖಂಡ ಭಾರತದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿ ನಾಯಕರು ಅಖಂಡ ಕರ್ನಾಟಕಕ್ಕೆ ದಕ್ಕೆಯಾಗುತ್ತಿರುವಾಗ ಬಾಯಿ ಬಿಡದಿರುವುದೇಕೆ? ಕರ್ನಾಟಕದ ಅಸ್ಮಿತೆಯನ್ನು ನಾಶ ಮಾಡುವ ನಾಗಪುರದ ಗುಪ್ತ ಕಾರ್ಯಸೂಚಿಗೆ #ಕರ್ನಾಟಕವಿರೋಧಿಬಿಜೆಪಿ ನಾಯಕರು ಸಹಕರಿಸುತ್ತಿದ್ದಾರೆ. ಮಹಾ ಉದ್ಧಟತನಕ್ಕೆ ಕಡಿವಾಣ ಹಾಕಬೇಕಾದ ಮೋದಿ ಮೌನವಹಿಸಿದ್ದೇಕೆ?’ ಎಂದು ಪ್ರಶ್ನಿಸಿದೆ.

‘ಕನ್ನಡ, ಕರ್ನಾಟಕ, ಕನ್ನಡಿಗ ಈ ಮೂರೂ ವಿಷಯಗಳಲ್ಲಿ ಬಿಜೆಪಿ ಹಲವಾರು ದ್ರೋಹ ಎಸಗಿದ ಕರಾಳ ಇತಿಹಾಸವಿದೆ. ಕರ್ನಾಟಕವನ್ನ ಒಡೆಯುವುದಷ್ಟೇ ಅಲ್ಲ, ಪರ ರಾಜ್ಯಗಳಿಗೆ ಕರ್ನಾಟಕವನ್ನು ಹರಿದು ಹಂಚುವುದು ಬಿಜೆಪಿಯ ಆಂತರ್ಯದ ಅಜೆಂಡಾ. ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂಬ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆಗೆ #ಕರ್ನಾಟಕದ್ರೋಹಿಬಿಜೆಪಿ ಮೌನ ವಹಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap