ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ನಟ..!

ಬೆಂಗಳೂರು:

    ಸದಾ ವಿವಾದದ ಮೂಲಕ ಸುದ್ದಿಯಲ್ಲಿರುವ ಆದಿನಗಳು ಖ್ಯಾತಿಯ ನಟ ಚೇತನ್ ಸದ್ಯ ರಾಜ್ಯದಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ  ಚರ್ಚೆ ನಡೆಯುತ್ತಿರುವ ಹಿನ್ನಲ್ಲೇ ಚೇತನ್ ಕೂಡ ಪ್ರತಿಕ್ರಿಯಿಸಿದ್ದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

     ತಮ್ಮ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ಫೋಸ್ಟ್ ಮಾಡಿರುವ  ಚೇತನ್ ಅವರು  ಬ್ರಾಹ್ಮಣ ಮತ್ತು ಗಂಡಸು ಆಗಿ ‘ಆಕಸ್ಮಿಕವಾಗಿ’ ಜನಿಸಿದವರೆಲ್ಲರೂ ಒಂದೇ ಆಗಿರುವುದಿಲ್ಲ, ಉದಾರವಾದಿ ಬ್ರಾಹ್ಮಣ ಪುರುಷರು ಅಧಿಕಾರಕ್ಕಾಗಿ 1885 ರಲ್ಲಿ ಕಾಂಗ್ರೆಸ್ ಅನ್ನು ಪ್ರಾರಂಭಿಸಿದರು , ಹಿಂದುತ್ವ ಬ್ರಾಹ್ಮಣ ಪುರುಷರು ಸುಳ್ಳು ಇತಿಹಾಸದ ಮೇಲೆ 1925 ರಲ್ಲಿ RSS ನ್ನು ಪ್ರಾರಂಭಿಸಿದರು ಎಂದು ಹೇಳಿದ್ದಾರೆ.

ಇದರ  ಮುಂದುವರಿದ ಭಾಗವಾಗಿ  ಕಮ್ಯುನಿಸ್ಟ್ ಬ್ರಾಹ್ಮಣ ಪುರುಷರು ಆರ್ಥಿಕ ಬದಲಾವಣೆಗಾಗಿ 1925 ರಲ್ಲಿ ಸಿಪಿಐ ಪ್ರಾರಂಭಿಸಿದರು, ಸಮಾನತವಾದಿ ಬ್ರಾಹ್ಮಣ ಪುರುಷರು ನಿಜವಾದ ನ್ಯಾಯಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡಬೇಕು, ಹೋರಾಡಬೇಕು ಮತ್ತು ದೇಶ ನಿರ್ಮಿಸಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap