ತುಮಕೂರು:
ತುಮಕೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ ವಿಪರೀತ ಗಾಳಿ ಬೀಸಿ ಸಾಕಷ್ಟು ಮರಗಳು ನೆಲಕ್ಕುರುಳಿರುವ ಘಟನೆ ವರದಿಯಾಗಿದೆ.ತುಮಕೂರು ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಸಂಜೆ ಮಳೆ ಆರಂಭವಾಯಿತು. ಮಳೆಗಿಂತ ಗಾಳಿ ಹೆಚ್ಚು ಬೀಸಿದ ಪ್ರದೇಶಗಳಲ್ಲಿ ಮರಗಳು ಬಿದ್ದು ಹೋಗಿವೆ.
ಮೈಲನಹಟ್ಟಿ ಮಾರನಹಟ್ಟಿ ಅದಲಾಪುರ ಸುತ್ತ ಮುತ್ತ ಬಾರಿ ಗಾಳಿ ಮಳೆ ಯಿಂದಾಗಿÀ ತುಂಬಾ ಬೆಲೆ ಬಾಳುವಅಡಿಕೆ ಹಾಗೂ ತೆಂಗಿನ ಮರಗಳು ಭೂಮಿಗೆ ಉರುಳಿವೆ. ಅಲ್ಲದೆ ಈ ಭಾಗದ ಸುತ್ತ ಮುತ್ತ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸಂಜೆ 4 ಗಂಟೆಯಿಂದ ಮಳೆ ಆರಂಭವಾಯಿತು. ಮಳೆಗಿಂತ ಗಾಳಿಯೇ ಅಧಿಕವಾಗಿತ್ತು.
ರಾಜ್ಯದ ಶಾಲೆಗಳಲ್ಲಿ ಪುಸಕ್ತ ಶೈಕ್ಷಣಿಕ ವರ್ಷದಿಂದಲೇ `ಭಗವದ್ಗೀತೆ’ ಬೋಧನೆ!
ಒಂದೊಂದು ತೋಟದಲ್ಲಿ ಗಾಳಿಯ ರಭಸಕ್ಕೆ 10 ರಿಂದ 20 ಮರಗಳ ತನಕ ಬಿದ್ದು ಹೋಗಿವೆ. ಅಡಿಕೆ ಹಾಗೂ ತೆಂಗಿನ ಮರಗಳು ರಭಸ ಗಾಳಿಗೆ ಬಿದ್ದು ಹೋಗಿದ್ದು ಮನೆಗಳಿಗೂ ಹಾನಿಯಾಗಿವೆ ಎಂದು ಆ ಭಾಗದ ಮುಖಂಡ ಈರೇಗೌಡ ತಿಳಿಸಿದರು.ಗಾಳಿ ಮಳೆಯಿಂದ ಹಾನಿಯಾಗಿರುವ ರೈತರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ದೊರಕಿಸಿಕೊಡಬೇಕು ಎಂದು ಆಲ್ಲಿನ ಗ್ರಾಮ ಪಂಚಾಯತ್ ಸದಸ್ಯರಾದ ಅನ್ನಪೂರ್ಣ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ