ಪಾವಗಡ :
ಸ್ನೇಹಿತರ ಜೊತೆ ಉತ್ತರ ಪಿನಾಕಿನಿ ನದಿಗೆ ಬಂದಿದ್ದ ಯುವಕ ಆಯಾ ತಪ್ಪಿ ನದಿಗೆ ಜಾರಿ ಬಿದ್ದು, ಸಾವನ್ನಪ್ಪಿದ ಘಟನೆ ನಾಗಲಮಡಿಕೆ ಡ್ಯಾಂ ಬಳಿ ಶನಿವಾರ ಸಂಜೆ ನಡೆದಿದೆ.
ಆಂಧ್ರ ಪ್ರದೇಶದ ಹಿಂದೂಪುರ ತಾಲ್ಲೂಕಿನ ಪೆದ್ದಕೊಡಿಪಲ್ಲಿ ಚಲಪತಿ (22) ಎಂಬಾತ ಸಾವನ್ನಪ್ಪಿದ ನತದೃಷ್ಟನಾಗಿದ್ದಾನೆ. ಇದೇ ಗ್ರಾಮದ ಆರು ಮಂದಿ ಯುವಕರು ತುಂಬಿ ಹರಿಯುತ್ತಿರುವ ನಾಗಲಮಡಿಕೆ ಡ್ಯಾಂ ನೋಡಲು ಶನಿವಾರ ಬಂದಿದ್ದರು. ಈ ವೇಳೆ ಚಲಪತಿ ಎಂಬ ಯುವಕ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದು, ಘಟನೆ ಕುರಿತು ತಿರುಮಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
